ADVERTISEMENT

ವಿಜಯಪುರ: ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 8 ಮೇ 2021, 12:30 IST
Last Updated 8 ಮೇ 2021, 12:30 IST
ವಿಜಯಪುರ ನಗರದ ಅಫಝಲಪುರ ಟಕ್ಕೆಯಲ್ಲಿ ಸಿಡಿಲು ಬಡಿದು ಮೃತಪಟ್ಟಿದವರ ಕುಟುಂಬದವರಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಶನಿವಾರ ಆರ್ಥಿಕ ನೆರವು ನೀಡಿದರು
ವಿಜಯಪುರ ನಗರದ ಅಫಝಲಪುರ ಟಕ್ಕೆಯಲ್ಲಿ ಸಿಡಿಲು ಬಡಿದು ಮೃತಪಟ್ಟಿದವರ ಕುಟುಂಬದವರಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಶನಿವಾರ ಆರ್ಥಿಕ ನೆರವು ನೀಡಿದರು   

ವಿಜಯಪುರ:ನಗರದ ಅಫಝಲಪುರ ಟಕ್ಕೆಯಲ್ಲಿಇತ್ತೀಚೆಗೆ ಸಿಡಿಲು ಬಡಿದು ಸಾವಿಗೀಡಾದ ಭಾಷಾಸಾಬ್ ಕರ್ಜಗಿ, ಅಶೋಕರಾಮಕಾರಜೋಳ ಹಾಗೂ ಜಾವಿದ್‌ ಹಾಜಿಸಾಬ್‌ ಜಾಲಗೇರಿ ಅವರಕುಟುಂಬದವರಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಶನಿವಾರ ಆರ್ಥಿಕ ನೆರವು ನೀಡಿದರು.

ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸರ್ಕಾರದಿಂದ ಸಿಗುವ ಪರಿಹಾರಕೊಡಿಸಲಾಗುವುದು. ಸರ್ಕಾರ ಕೂಡಲೇ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಬೇಕು ಎಂದು ಒತ್ತಾಯಿಸಿದರು.

ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಭಕ್ಷಿ, ಜಲನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಾಹಪುರ, ಅನಿಲ್ ಅವಳೆ, ಅಲ್ತಾಫ್ ಅಸ್ಕಿ, ಯುನೂಸ್, ರಹೀಮ್ ಮುಶ್ರೀಫ್, ನಗರಸಭೆ ಮಾಜಿ ಸದಸ್ಯ ಕರ್ಜಗಿ, ರವಿ ಕುಂಬಾರ, ಹಾಜಿ ಪಿಂಜಾರ್ ಮತ್ತು ಕಾರಜೋಳ ಕುಟುಂಬದವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.