ವಿಜಯಪುರ: ನಗರದ ಮನಗೂಳಿ ಅಗಸಿ ಸಮೀಪದ ಸ್ಮಶಾನದ ಬಳಿ ಇರುವ ಬಿಡಿಎ ಕಾಂಪ್ಲೆಕ್ ಎದುರು ಬುಧವಾರ ರಾತ್ರಿ ಶೂಟ್ಔಟ್ ಪ್ರಕರಣ ನಡೆದಿದ್ದು, ಘಟನೆಯಿಂದ ಗುಮ್ಮಟನಗರಿ ಜನ ಬೆಚ್ಚಿಬಿದ್ದಿದ್ದಾರೆ.
ಹಣಕಾಸಿನ ವಿಷಯವಾಗಿ ವ್ಯಕ್ತಿಗಳಿಬ್ಬರು ತಮ್ಮ ಸಂಬಂಧಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಜೊತೆಗೆ ಮತ್ತೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಪದ್ದು ರಾಠೋಡ ಎಂಬುವವರ ಎದೆಗೆ ಒಂದು ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೇಗಂ ತಲಾಬ್ ತಾಂಡಾದ ಸಿವಿಲ್ ಗುತ್ತಿಗೆದಾರ ಅಶೋಕ ರಾಠೋಡ ಎಂಬುವವರ ಕೈಗೆ ಚಾಕುವಿನಿಂದ ಇರಿಯಲಾಗಿದೆ.
ಪ್ರಕರಣದ ಸಂಬಂಧ ಮನಗೂಳಿ ಅಗಸಿಯ ತುಳಸಿರಾಮ ಹರಿಜನ ಮತ್ತು ವಿಕಾಸ ಹಾಗೂ ಇನ್ನಿಬ್ಬರು ಆರೋಪಿಗಳ ವಿರುದ್ಧ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಮಹಾದೇವ ಬೈರಗೊಂಡ ಮೇಲೆ ನಡೆದ ಶೂಟ್ಔಟ್ ಪ್ರಕರಣದ ಬೆನ್ನೆಲ್ಲೇ ನಗರದಲ್ಲಿ ಮತ್ತೊಂದು ಶೂಟ್ಔಟ್ ಪ್ರಕರಣ ನಡೆದಿರುವುದು ಜನರನ್ನು ಆತಂಕ್ಕೆ ದೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.