ADVERTISEMENT

ಸರ್ಕಾರ ನಮ್ಮ ತಲೆಗೆ ತುಪ್ಪ ಸುರಿದಿದೆ: ಕೂಡಲಸಂಗಮ ಪೀಠದ ಸ್ವಾಮೀಜಿ

ಮೀಸಲಾತಿ ವರ್ಗೀಕರಣ: ಕೂಡಲಸಂಗಮ ಪೀಠದ ಸ್ವಾಮೀಜಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 21:53 IST
Last Updated 31 ಡಿಸೆಂಬರ್ 2022, 21:53 IST
ಬಸವ ಜಯ            ಮೃತ್ಯುಂಜಯ ಶ್ರೀ
ಬಸವ ಜಯ ಮೃತ್ಯುಂಜಯ ಶ್ರೀ   

ವಿಜಯಪುರ: ‘ಸರ್ಕಾರ ಮೀಸಲಾತಿ ತುಪ್ಪವನ್ನು ಮೂಗಿಗೆ ಸವರಿದ್ದರೆ ವಾಸನೆ ಆದರೂ ನೋಡಬಹುದಿತ್ತು. ಈಗ ತಲೆಗೆ ಸುರಿದಿದೆ. ಏನೂ ತಿಳಿಯದೇ ಗೊಂದಲದಲ್ಲಿದ್ದೇವೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಎಲ್ಲ ಲಿಂಗಾಯತರನ್ನು 2ಡಿ ಗೆ ಸೇರಿಸಿರುವುದು ಬಹಳ ಸಂತೋಷ. ನಮ್ಮ ಹೋರಾಟದಿಂದ ಎಲ್ಲ ಲಿಂಗಾಯತರಿಗೂ ಒಳ್ಳೆಯದಾಗಿದ್ದು, ನಾವು ಅದನ್ನು ಸ್ವಾಗತಿಸುತ್ತೇವೆ’ ಎಂದರು.

‘ಆದರೆ, ನಿಜವಾದ ಹೋರಾಟ ಮಾಡಿದವರು ಪಂಚಮಸಾಲಿಗಳು. ಕಳೆದ 2 ವರ್ಷದಿಂದ ಮನೆ-ಮಠಗಳನ್ನು ಬಿಟ್ಟು ಹೋರಾಟ ಮಾಡಿದ್ದೇವೆ. ನಮ್ಮ ಪಾಲು ಎಷ್ಟು ಎಂದು ಸ್ಪಷ್ಟತೆ ಇಲ್ಲ. ನಾವು ದುಡಿದಿದ್ದಕ್ಕೆ ಸರ್ಕಾರ ಪ್ರತಿಫಲ ಕೊಡಲಿಲ್ಲ’ ಎಂದರು.

ADVERTISEMENT

ಬೆಳಗಾವಿಯಲ್ಲಿ ಎರಡು ದಿನಗಳಲ್ಲಿ ರಾಜ್ಯ ಮಟ್ಟದ ಪಂಚಮಸಾಲಿ ಕಾರ್ಯಕಾರಿಣಿ ಸಭೆಯನ್ನು ಕರೆಯುತ್ತೇವೆ. ಈ ಮೀಸಲಾತಿ ಸ್ವೀಕರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಅಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.