ADVERTISEMENT

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಪುತ್ರಿ ಅದ್ದೂರಿ ವಿವಾಹ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 15:39 IST
Last Updated 29 ನವೆಂಬರ್ 2021, 15:39 IST
ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ–ಭಾಗ್ಯಶ್ರೀ ದಂಪತಿ ಹಿರಿಯ ಪುತ್ರಿ ಸಂಯುಕ್ತಾ ಅವರ ವಿವಾಹವು ಬೀದರ್‌ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಶಿವಕುಮಾರ್‌ ಅವರೊಂದಿಗೆ ವಿಜಯಪುರ ನಗರದ ಬೇಗಂ ತಲಾಬ್‌ ಹತ್ತಿರ ಸೋಮವಾರ ನೆರವೇರಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನವ ವಧು–ವರರನ್ನು ಆಶೀರ್ವದಿಸಿದರು
ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ–ಭಾಗ್ಯಶ್ರೀ ದಂಪತಿ ಹಿರಿಯ ಪುತ್ರಿ ಸಂಯುಕ್ತಾ ಅವರ ವಿವಾಹವು ಬೀದರ್‌ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಶಿವಕುಮಾರ್‌ ಅವರೊಂದಿಗೆ ವಿಜಯಪುರ ನಗರದ ಬೇಗಂ ತಲಾಬ್‌ ಹತ್ತಿರ ಸೋಮವಾರ ನೆರವೇರಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನವ ವಧು–ವರರನ್ನು ಆಶೀರ್ವದಿಸಿದರು   

ವಿಜಯಪುರ: ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ–ಭಾಗ್ಯಶ್ರೀ ದಂಪತಿ ಹಿರಿಯ ಪುತ್ರಿ ಸಂಯುಕ್ತಾ ಅವರ ವಿವಾಹವು ಬೀದರ್‌ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಶಿವಕುಮಾರ್‌ ಅವರೊಂದಿಗೆ ನಗರದ ಬೇಗಂ ತಲಾಬ್‌ ಹತ್ತಿರ ಸೋಮವಾರ ಅದ್ಧೂರಿಯಾಗಿ ನೆರವೇರಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು, ಬಂಧುಗಳು ಹಾಗೂ ಸಹಸ್ರಾರು ಜನರು ವಿವಾಹ ಅರತಕ್ಷತೆಯಲ್ಲಿ ಪಾಲ್ಗೊಂಡು, ನವ ವಧು–ವರರನ್ನು ಆಶೀರ್ವದಿಸಿದರು.

ವಿವಾಹ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಶೈಲಿಯ ತಿಂಡಿ, ತಿನಿಸು, ಭಕ್ಷ್ಯ–ಭೋಜನ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.