
ಪ್ರಜಾವಾಣಿ ವಾರ್ತೆ
ಕೊಲ್ಹಾರ: ರೋಣಿಹಾಳ ಸಂಗನಬಸವ ವಿದ್ಯಾವರ್ಧಕ ಸಂಘದಿಂದ ಕೊಡಮಾಡುವ ‘ಸಂಗನಬಸವ ಶ್ರೀ’ ಪ್ರಶಸ್ತಿಗೆ ಪಟ್ಟಣದ ಪತ್ರಕರ್ತ ಮಶಾಕ ಬಳಗಾರ ಆಯ್ಕೆಯಾಗಿದ್ದಾರೆ.
ಫೆ.9ರಂದು ಸಂಜೆ 5 ಗಂಟೆಗೆ ಸಂಗನಬಸವ ವಿದ್ಯಾವರ್ಧಕ ಸಂಘದ ಸಂಗನಬಸವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ‘ಸಂಗನಬಸವ ಉತ್ಸವ’ ಕಾರ್ಯಕ್ರಮದಲ್ಲಿ ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.