ADVERTISEMENT

ಫಾರ್ಮಸಿ ಅಧಿಕಾರಿಗಳ ಜಿಲ್ಲಾ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:36 IST
Last Updated 27 ಸೆಪ್ಟೆಂಬರ್ 2021, 15:36 IST

ವಿಜಯಪುರ: ಕರ್ನಾಟಕ ರಾಜ್ಯ ಫಾರ್ಮಸಿ ಅಧಿಕಾರಿಗಳ ಸಂಘದ ವಿಜಯಪುರ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಬಸವನ ಬಾಗೇವಾಡಿ ತಾಲ್ಲೂಕು ಆಸ್ಪತ್ರೆಯ ಹಿರಿಯ ಫಾರ್ಮಸಿ ಅಧಿಕಾರಿ ಮಲ್ಲಿಕಾರ್ಜುನ ಶಿರಮಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ, ಆರ್‌ಸಿಎಚ್‌ಒ ಕಚೇರಿಯ ಫಾರ್ಮಸಿ ಅಧಿಕಾರಿ ಪ್ರವೀಣ ಹೊಳಿ, ರಾಜ್ಯ ಪರಿಷತ್‌ ಸದಸ್ಯರಾಗಿ ಬರಡೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿ ಶಿವಾನಂದ ಹಕ್ಕಿ ಆಯ್ಕೆಯಾಗಿದ್ದಾರೆ.

ಕಾರ್ಯಧ್ಯಕ್ಷರಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಮುಖ್ಯ ಫಾರ್ಮಸಿ ಅಧಿಕಾರಿ ವಸುಧೇಂದ್ರ, ಗೌರವಾಧ್ಯಕ್ಷರಾಗಿ ಸಿಂದಗಿ ತಾಲ್ಲೂಕು ಆಸ್ಪತ್ರೆಯ ಹಿರಿಯ ಫಾರ್ಮಸಿ ಅಧಿಕಾರಿ ಶಂಕರ ಭೀ. ಮಳ್ಳಿ, ವಿನೋದ ಮಹಾಜನ (ಕೋಶಾಧ್ಯಕ್ಷ), ರಮೇಶ ಬಿರಾದಾರ (ಸಲಹಾ ಸಮಿತಿ ಅಧ್ಯಕ್ಷ), ಅಶೋಕ ಎಸ್‌.ತೆಲ್ಲೂರ ಮತ್ತು ಸುಭಾಸ ಕುಂಬಾರ (ಸಲಹಾ ಸಮಿತಿ ಉಪಾಧ್ಯಕ್ಷರು), ಸಚಿನ್‌ ರಾಠೋಡ (ಪ್ರಧಾನ ಕಾರ್ಯದರ್ಶಿ –ಸಂಘಟನೆ), ಅಂಜು ಕಾಳೆ (ಮಹಿಳಾ ಸಂಘಟನಾ ಕಾರ್ಯದರ್ಶಿ), ಚೇತನ ಭದ್ರಗೊಂಡ (ಸಾಂಸ್ಕೃತಿಕ ಕಾರ್ಯದರ್ಶಿ), ಸುರೇಶ ಜಾಧವ (ಕ್ರೀಡಾ ಕಾರ್ಯದರ್ಶಿ), ಸುರೇಶ ಬಬಲೇಶ್ವರ (ಸಹ ಕಾರ್ಯದರ್ಶಿ), ಎಸ್‌.ಆರ್‌. ಕಟ್ಟಿಮನಿ (ಆಂತರಿಕ ಲೆಕ್ಕಪರಿಶೋಧಕ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ‍್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.