ADVERTISEMENT

ಇಂಡಿ: ಶಾರ್ಟ್‌ ಸರ್ಕಿಟ್, 3 ಎಕರೆ ಕಬ್ಬು ಭಸ್ಮ 

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:26 IST
Last Updated 8 ಜನವರಿ 2026, 2:26 IST
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕಮಲಾಬಾಯಿ ದುಂಡಪ್ಪ ಪೂಜಾರಿ (ಅಮರಗೊಂಡ) ಅವರ ಹೊಲದಲ್ಲಿದ್ದ 3 ಎಕರೆ ಕಬ್ಬು ವಿದ್ಯತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗುಲಿ ಸುಟ್ಟಿದೆ
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕಮಲಾಬಾಯಿ ದುಂಡಪ್ಪ ಪೂಜಾರಿ (ಅಮರಗೊಂಡ) ಅವರ ಹೊಲದಲ್ಲಿದ್ದ 3 ಎಕರೆ ಕಬ್ಬು ವಿದ್ಯತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗುಲಿ ಸುಟ್ಟಿದೆ   

ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದ ರೈತ ಮಹಿಳೆ ಕಮಲಾಬಾಯಿ ದುಂಡಪ್ಪ ಪೂಜಾರಿ (ಅಮರಗೊಂಡ) ಸರ್ವೇ ನಂಬರ್ 667/2 ಪೈಕಿ ಹದಿನಾರು ಎಕರೆ ಜಮೀನ ಪೈಕಿ ಮೂರು ಎಕರೆ ಜಮೀನಿನಲ್ಲಿರುವ ಕಬ್ಬಿಗೆ ಬುಧವಾರ ವಿದ್ಯುತ್ ಶಾರ್ಕಿಟ್‌ ಆಗಿ ಸುಮಾರು ₹ 6ಲಕ್ಷ ಮೌಲ್ಯದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.

ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಹೊಲ ಸುಟ್ಟಿದೆ. ಈ ಸುದ್ದಿ ತಿಳಿದು ಇಂಡಿ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದರು.

ನಂತರ ಮಾತನಾಡಿದ ಹೆಸ್ಕಾಂ ವಲಯ ಅಧಿಕಾರಿ ಬಾಬಾನಗರ ಅವರು ಈ ಹೊಲದಲ್ಲಿ ಎಲ್ಆಂಡ್‌ಟಿ ಲೈನ್ ಹಾದು ಹೋಗಿದ್ದು, ಅದು ಕತ್ತರಿಸಿ ಜಮೀನಿನಲ್ಲಿಒ ಬಿದ್ದು ಬೆಂಕಿ ಹೊತ್ತಿಕೊಂಡು ಮೂರು ಎಕರೆ ಕಬ್ಬು ಸುಟ್ಟು ಹೋಗಿದೆ ಎಂದು ಹೇಳಿದರು.

ADVERTISEMENT

ತಡವಲಗಾ ಗ್ರಾಮದ ಆಡಳಿತ ಅಧಿಕಾರಿ ಮಂಜುನಾಥ ಗುರುಬಟ್ಟಿ ಭೇಟಿ ನೀಡಿ ಪರಿಶೀಲನೆ ಮಾಡಿ ಪಂಚನಾಮೆ ಮಾಡಿದರು. ಈ ಕುರಿತು ಹೊರ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.