ADVERTISEMENT

ಕೊಣ್ಣೂರ ಗ್ರಾಮದ ಯೋಧ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 21:31 IST
Last Updated 7 ಮಾರ್ಚ್ 2021, 21:31 IST
ಪರಶುರಾಮ ಬಸಪ್ಪ ಚಿರಕನಳ್ಳಿ
ಪರಶುರಾಮ ಬಸಪ್ಪ ಚಿರಕನಳ್ಳಿ   

ತಾಳಿಕೋಟೆ: ತಾಲ್ಲೂಕಿನ ಕೊಣ್ಣೂರ ಗ್ರಾಮದ ಯೋಧ ಪರಶುರಾಮ ಬಸಪ್ಪ ಚಿರಕನಳ್ಳಿ(25) ಅವರು ನವದೆಹಲಿಯ ಮಥುರಾ ಕ್ಯಾಂಪ್ ನಿವಾಸದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

7 ವರ್ಷಗಳಿಂದ 20ನೇ ಎಂಜಿನಿಯರಿಂಗ್‌ ರೆಜಿಮೆಂಟ್‌ನಲ್ಲಿ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಪರಶುರಾಮ ಅವರು, ಕಳೆದ ಒಂದು ವರ್ಷದಿಂದ ಪತ್ನಿ ಜಯಶ್ರೀ ಸಮೇತರಾಗಿ ಮಥುರಾ ಕ್ಯಾಂಪ್‌ನ ವಸತಿಗೃಹದಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರಿಗೆ ಪತ್ನಿ, ತಂದೆ, ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಸೋಮವಾರ ಸಂಜೆ ಯೋಧನ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.