ಕೊಲ್ಹಾರ: ಕೊಲ್ಹಾರ ಪಟ್ಡಣದಲ್ಲಿ ತೆರಪಿ ಯಲ್ಲಮ್ಮದೇವಿ ಜಾತ್ರೋತ್ಸವ ಅಂಗವಾಗಿ ಮೊದಲ ದಿನ ಭಕ್ತರು ತಮ್ಮ ಎಂಬತ್ತಕ್ಕೂ ಹೆಚ್ಚಿನ ಎತ್ತಿನ ಬಂಡಿಗಳಲ್ಲಿ ದೇವಸ್ಥಾನಕ್ಕೆ ಹಂದರ ತಪ್ಪಲುಗಳನ್ನು ತಂದು ಸಮರ್ಪಿಸಿದರು.
ದೇವಸ್ಥಾನದ ಉಪಾಸಕ ಸಂಗಪ್ಪ ಬಾಟಿಯವರ ನೇತೃತ್ವದಲ್ಲಿ ಡೊಳ್ಳಿನ ಮೇಳದೊಂದಿಗೆ ಹಂದರ ತಪ್ಪಲಗಳಾದ ತೆಂಗಿನಗರಿ, ನೀರಲ, ಬೋಚಿ, ಬಾಳೆ ತಪ್ಪಲಗಳನ್ನು ಭಕ್ತರು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಸಾಗಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತಂದರು.
ಸಂಜೆ ಅನ್ನಸಂತರ್ಪಣೆ ಹಾಗೂ ರಾತ್ರಿ ಸಂಗಪ್ಪ ಅಂಬಿಗೇರ ಇವರಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನ ಜರುಗಿತು. ಈ ವೇಳೆ ದೇವಸ್ಥಾನ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮುಖಂಡರಾದ ಹುಚ್ಚಪ್ಪ ಬಾಟಿ, ಪುಂಡಲೀಕ ಬಾಟಿ, ಮಾಜಿ ಪ.ಪಂ ಅಧ್ಯಕ್ಷರುಗಳಾದ ಕಲ್ಲಪ್ಪ ಸೊನ್ನದ, ವಿರೂಪಾಕ್ಷಿ ಕೊಲಕಾರ, ರೈತ ಮುಖಂಡರಾದ ಮಳೆಪ್ಪ ಬರಗಿ, ರಮೇಶ ಬಾಲಗೊಂಡ, ಪರಮಾನಂದ ಬರಗಿ ಹಾಗೂ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.