ADVERTISEMENT

ವಿಜಯಪುರ | ಜಿಲ್ಲೆಯ ಹಲವೆಡೆ ಉತ್ತಮ ಮಳೆ; ಸಿಡಿಲು ಬಡಿದು ಎತ್ತುಗಳು ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 15:57 IST
Last Updated 30 ಮಾರ್ಚ್ 2024, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಗುಡುಗಿ,ಸಿಡಿಲಿನೊಂದಿಗೆ ಶನಿವಾರ ಸಂಜೆ ಜಿಲ್ಲೆಯ ವಿವಿಧಡೆ ಉತ್ತಮ ಮಳೆಯಾಗಿದೆ.

ವಿಜಯಪುರ ತಾಲ್ಲೂಕಿನ ಗುಣಕಿ ಗ್ರಾಮದ ರೈತ ನಾನಾಗೌಡ ಮಲ್ಲಪ್ಪ ಬಿರಾದಾರ ಅವರ ಎತ್ತುಗಳಿಗೆ ಶನಿವಾರ ಸಂಜೆ ಸಿಡಲು ಬಡಿದು, ಸಾವಿಗೀಡಾಗಿವೆ.

ವಿಜಯಪುರ ತಾಲ್ಲೂಕಿನ ಕನ್ನೂರು, ಮಖಣಾಪೂರ, ತಿಡಗುಂದಿ ಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆಯಾಗಿದೆ. 

ADVERTISEMENT

ಜಿಲ್ಲೆಯಲ್ಲಿ ವಾರದಿಂದ ಈಚೆಗೆ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿದ್ದು, ವಾತಾವರಣ ಕಾದ ಕಾವಲಿಯಂತಾಗಿದೆ. ಜನ, ಜಾನುವಾರು, ಪಕ್ಷಿಗಳು ಬಿಸಿಲಿನ ಬೇಗೆಯಿಂದ ತತ್ತರಿಸಿಹೋಗಿವೆ. ಈ ನಡುವೆ ಅಲ್ಲಲ್ಲಿ ಮಳೆಯಾಗಿರುವುದು ವಾತಾವರಣವನ್ನು ತಂಪಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.