ಆಲಮಟ್ಟಿ(ವಿಜಯಪುರ): ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟ ಕಾರಣ ಜಲಾಶಯದ ತಳಪಾತ್ರದಲ್ಲಿರುವ ಸಂಗೀತ ಕಾರಂಜಿ ಉದ್ಯಾನದೊಳಗೆ ನೀರು ಬಂದಿದೆ.
ಸಂಗೀತ ಕಾರಂಜಿಯ ನೀರು ನದಿಗೆ ಸೇರಿಸಲು ಹಾಕಿದ ಡ್ರೈನೇಜ್ ಪೈಪ್ ಅನ್ನು ನದಿಗೆ ಸೇರಿಸಲಾಗಿದೆ. ನದಿಯ ನೀರು ಅದೇ ಪೈಪ್ ಮೂಲಕ ಸಂಗೀತ ಕಾರಂಜಿಯೊಳಗೆ ಬಂದಿದೆ.
ಇದರಿಂದ ಉದ್ಯಾನದ ಆವರಣ ತುಂಬ ನೀರು ಆವರಿಸಿದೆ. ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿ ಸೋಮವಾರ ಆರಂಭಗೊಂಡಿತ್ತು. ಈಗ ತಾತ್ಕಾಲಿಕ ವಾಗಿ ಬಂದ್ ಮಾಡಲಾಗಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.