ADVERTISEMENT

‘ಯುವಕರಿಂದ ದೇಶದ ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:18 IST
Last Updated 3 ಜನವರಿ 2014, 9:18 IST
ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್‌ ಟೂರ್ನಿ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು
ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್‌ ಟೂರ್ನಿ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು   

ಯಾದಗಿರಿ: ದೇಶ ಕಾಯುವ ಸೈನಿಕರು ಹಾಗೂ ದೇಶದ ಕ್ರೀಡಾಪಟುಗಳು ಯುವಕರಾಗಿದ್ದು, ಅವರಿಂದಲೇ ದೇಶದ ಕೀರ್ತಿ ಹೆಚ್ಚುತ್ತಿದೆ. ಈ ಹಿನ್ನೆಲೆ­ಯಲ್ಲಿ ಬಿಜೆಪಿ ಯುವಕರಿಗೆ ಪ್ರಾಧಾ­ನ್ಯತೆ ನೀಡಲು ನಿರ್ಧರಿಸಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣಿ ಹೇಳಿದರು.

ಇಲ್ಲಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿ­ಯಿಂದ ಗುರುವಾರ ಆಯೋಜಿಸಿದ್ದ ನರೇಂದ್ರ ಕೋ ನಮನ್ ಕ್ರಿಕೆಟ್‌ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಬದಲಾವಣೆ ತರಲು ದೇಶಕ್ಕೆ ನರೇಂದ್ರ ಮೋದಿ ನಾಯಕತ್ವ ಅವಶ್ಯವಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಅಭಿ­ವೃದ್ಧಿಗೆ ವೇಗ ತರಲು ಸಮರ್ಥ ನಾಯಕತ್ವ ಉಳ್ಳವರ ಅವಶ್ಯಕತೆ ಇದ್ದು, ಅಂತಹ ಸಮರ್ಥ ನಾಯಕತ್ವ ನರೇಂದ್ರ ಮೋದಿಯವರು ಹೊಂದಿ­ದ್ದಾರೆ. ಯುವ ಜನತೆ ಮೋದಿ ಬೆಂಬಲಕ್ಕೆ ನಿಂತು, ಅವರನ್ನು ಬೆಂಬಲಿಸಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.

ಕ್ರೀಡಾಕೂಟಗಳು ಜಾತಿ, ಮತ,ಪಂಥಗಳನ್ನು ಮೀರಿ ಸ್ನೇಹ, ಸೌಹಾರ್ದ­ವನ್ನು ಬೆಳೆಸುವ ವೇದಿಕೆಗಳಾಗಿವೆ. ಯುವ ಜನತೆ ಕ್ರೀಡಾಕೂಟಗಳಲ್ಲಿ ಭಾಗ­­­ವಹಿ­ಸುವುದರಿಂದ ಭ್ರಾತೃತ್ವ ಮತ್ತು ಸ್ನೇಹ ಬೆಳೆಯಲು ಸಹಕಾರಿ ಆಗಲಿದೆ. ಈ ಆಶಯದೊಂದಿಗೆ ಬಿಜೆಪಿ ಯುವ ಮೋರ್ಚಾ ಕ್ರಿಕೆಟ್‌ ಟೂರ್ನಿ ಆಯೋ­ಜಿಸಿದೆ ಎಂದು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ­ಯಿಂದ ಮಾತ್ರ ಯುವಕರಲ್ಲಿ ದೈಹಿಕ, ಮಾನಸಿಕ ಪ್ರಗತಿಯಾಗಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ವೀರಣ್ಣಗೌಡ ಮಲ್ಲಾಬಾದಿ ಹೇಳಿದರು. ಯುವ ಪಡೆ ದುಶ್ಚಟಗಳಿಂದ ದೂರ­ವಾಗಿ ಕ್ರೀಡೆ­ಗಳತ್ತ ಹಾಗೂ ಇನ್ನಿತರ ಚಟುವಟಿ­ಕೆ­ಗಳಲ್ಲಿ ಭಾಗಿಯಾ­ಗಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ರವೀಂದ್ರರಡ್ಡಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾ­ರಿಗಳು ಕ್ರಿಕೆಟ್‌ ಟೂರ್ನಿ ಹಮ್ಮಿ­ಕೊಳ್ಳುವ ಮೂಲಕ ಯುವ ಕ್ರೀಡಾ­ಪಟು­ಗಳಿಗೆ ಕ್ರೀಡಾ ಪ್ರತಿಭೆ ಪ್ರದರ್ಶಿಲು ವೇದಿಕೆ ಕಲ್ಪಿಸಿದೆ. ಕ್ರೀಡಾ ಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಅಂಬಿಗೇರ ಮಾತ­ನಾಡಿ, ಜಿಲ್ಲೆಯಲ್ಲಿ ಯುವಕ­ರನ್ನು ಒಗ್ಗೂಡಿಸಿ ಅವರ ಮೂಲಕ ಅಭಿವೃದ್ಧಿ­ಯ ದೃಷ್ಟಿಕೋನವುಳ್ಳ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲಿಸಲು ಪಕ್ಷ ಸಂಘ­ಟಿಸಲಾಗುವುದು ಎಂದು ಹೇಳಿದರು.
ಲಿಂಗಪ್ಪ ಹತ್ತಿಮನಿ, ವೆಂಕಟರಡ್ಡಿ ಅಬ್ಬೆತುಮಕೂರ, ಭೀಮರಾಯ ಜಂಗಳಿ, ಮಲ್ಲಿಕಾರ್ಜುನ ಗುಳೇದ, ಬಸವ­ರಾಜಗೌಡ ಬಿಳ್ಹಾರ, ಮಂಜು ಜಡಿ, ಅಯ್ಯಣ್ಣ ಅಳ್ಳಳ್ಳಿ, ಹಣಮಂತ ಇಟಗಿ, ಗೋಪಾಲ ದಾಸನಕೇರಿ, ಸಾಯಿ­ಬಣ್ಣ ಚಂಡ್ರಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ಒಟ್ಟು 45 ತಂಡಗಳು ಭಾಗವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.