ADVERTISEMENT

ಜೆಆರ್‌ಎಫ್‌ ಪರೀಕ್ಷೆಯಲ್ಲಿ 196ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 16:10 IST
Last Updated 29 ಫೆಬ್ರುವರಿ 2024, 16:10 IST
ವೇಣುಗೋಪಾಲ ನಾಯಕ
ವೇಣುಗೋಪಾಲ ನಾಯಕ   

ಸುರಪುರ: ಕೇಂದ್ರ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಎಸ್‍ಐಆರ್ ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಪರೀಕ್ಷೆಯಲ್ಲಿ ಸುರಪುರದ ವೇಣುಗೋಪಾಲ ನಾಯಕ ವೆಂಕೋಬ ದೊರೆ 196ನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.
ವೇಣುಗೋಪಾಲ ನಾಯಕ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‍ಸಿ. (ಭೌತಶಾಸ್ತ್ರ) ಓದಿದ್ದು ಫ್ಲೋರೋಸೆನ್ಸ್ ವಿಷಯದ ಬಗ್ಗೆ ಸಂಶೋಧನೆ (ಪಿಎಚ್‍.ಡಿ) ಮಾಡುತ್ತಿದ್ದಾರೆ.

ಈ ಸಾಧನೆಗೆ ಕೇಂದ್ರ ಸರ್ಕಾರ ಈಗ ಪಿಎಚ್‍ಡಿ ಮಾಡಲು ಸ್ಕಾಲರ್‌ಷಿಪ್‌ ನೀಡುತ್ತದೆ. ಅಲ್ಲದೇ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ ಬರೆಯಲು ಅರ್ಹತೆ ದೊರಕುತ್ತದೆ. ವೇಣುಗೋಪಾಲ ನಾಯಕ ಅವರಿಗೆ ವಿಜ್ಞಾನಿ ಆಗುವ ಆಸೆ. ಜೊತೆಗೆ ಈ ಭಾಗದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕೆನ್ನುವ ಇಚ್ಛೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT