ಶಹಾಪುರ: ನಗರದ ಉಪ ನೋಂದಣಿ ಕಚೇರಿ ಬಳಿಯಲ್ಲಿ ಹಾಡುಹಗಲೇ ₹2 ಲಕ್ಷ ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ತಾಲ್ಲೂಕಿನ ಕೊಂಗಂಡಿ ಗ್ರಾಮದ ನಿಂಗಪ್ಪ ಹರಿಜನ ಹಣ ಕಳೆದುಕೊಂಡ ವ್ಯಕ್ತಿ.
ನನ್ನ ಮಗಳು ನರ್ಸಿಂಗ್ ಕೋರ್ಸ್ನ ಫೀ ಕಟ್ಟಲು ಉಪ ನೋಂದಣಿ ಕಚೇರಿಯಲ್ಲಿ ಎರಡು ಎಕರೆ ಜಮೀನು ‘ಭೂ ಸ್ವಾಧೀನ ಕರಾರು ರಹಿತ’ ನೋಂದಣಿ ಮಾಡಿಸಿ ಖಾಸಗಿ ವ್ಯಕ್ತಿಯಿಂದ ₹2ಲಕ್ಷ ಹಣ ಪಡೆದು ಕೊಂಡು ಬೈಕ್ ಮೇಲೆ ಹೊರಟಾಗ ಇಬ್ಬರು ಅಪರಿಚಿತ ಯುವಕರು ಎದುರುಗಡೆ ಬಂದು ಬೈಕ್ ಅಡ್ಡಗಟ್ಟಿ ನಿನ್ನ 20 ನೋಟುಗಳು ಬಿದ್ದಿವೆ ಎಂದು ತೋರಿಸಿದರು. ನಾನು ಬೈಕ್ ಬಿಟ್ಟು ನೋಟು ತೆಗೆದುಕೊಂಡ ಬರುವ ಷ್ಟರಲ್ಲಿ ಬೈಕ್ ಟ್ಯಾಂಕ್ನ ಮುಂದಿನ ಕವರ್ನಲ್ಲಿ ಇಟ್ಟಿದ್ದ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹಣ ಕಳೆದುಕೊಂಡ ನಿಂಗಪ್ಪ ತಿಳಿಸಿದರು.
ಶಹಾಪುರ ಠಾಣೆ ಪೊಲೀಸರು ದೂರು ತೆಗೆದುಕೊಳ್ಳದೆ ನಾಳೆ ಬಾ, ವಿಚಾರ ಮಾಡೋಣ ಮೀನವೇಷ ಎಣಿಸುತ್ತಿದ್ದಾರೆ ಎಂದು ಎಸ್ಪಿ ಸಲ್ಲಿಸಿದ ದೂರಿನಲ್ಲಿ ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.