ADVERTISEMENT

ಶಹಾಪುರ | ಲೈನ್‌ಮ್ಯಾನ್ ಮೇಲೆ ಹಲ್ಲೆ: 3 ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:48 IST
Last Updated 1 ಜುಲೈ 2025, 15:48 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಶಹಾಪುರ: ವಿದ್ಯುತ್ ನಿಲುಗಡೆ ಮಾಡುವಾಗ ಲೈನ್‌ಮ್ಯಾನ್‌(ಮಾರ್ಗದಾಳು) ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತು ಆಗಿದ್ದರಿಂದ ಮಂಗಳವಾರ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು, ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 6 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ADVERTISEMENT

ಶಹಾಪುರ ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಶಾಂತಪ್ಪ ಶರಣಪ್ಪ ಸೀತ್ನಿ ಶಿಕ್ಷೆಗೆ ಒಳಗಾದ ಅಪರಾಧಿ.

ಏನಿದು ಪ್ರಕರಣ: ಜೆಸ್ಕಾಂನ ಗೋಗಿ ಶಾಖೆಯಲ್ಲಿ ಲೈನ್‌ಮ್ಯಾನ್‌ ಬೀರಲಿಂಗ ಎಂಬುವರು, 2023 ಸೆಪ್ಟಂಬರ್ 11ರಂದು ತಾಲ್ಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಕಾರ್ಯನಿರ್ವಹಿಸುವಾಗಿ ಶಾಂತಪ್ಪ ಶರಣಪ್ಪ ಸೀತ್ನಿ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೀರಲಿಂಗ ಅವರು ಗೋಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.     

ನ್ಯಾಯಾಲಯಕ್ಕೆ ಗೋಗಿ ಠಾಣೆಯ ಪಿಎಸ್‌ಐ ದೇವೇಂದ್ರರಡ್ಡಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ದೂರುದಾರರ ಪರವಾಗಿ ಎಪಿಪಿ ಮರೆಪ್ಪ ಹೊಸಮನಿ ಹಳಿಸಗರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.