ಸೈದಾಪುರ: ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯು ಪ್ರಮುಖ ಕೃಷಿ ವಿಮಾ ಯೋಜನೆಯಾಗಿದೆ. ರೈತರಿಗೆ ಹಣಕಾಸಿನ ನೆರವು ಹಾಗೂ ನೈಸರ್ಗಿಕ ವಿಪತ್ತು, ಕೀಟಗಳು ಮತ್ತು ರೋಗಗಳಿಂದ ಬೆಳೆ ನಷ್ಟವಾದಾಗ ನೆರೆ ಹಾನಿಯ ಸಂದರ್ಭದಲ್ಲಿ ಅಪಾಯವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.
ಹಾಗಾಗಿ ವಿವಿಧ ಬೆಳೆಗಳ ಬೆಳೆ ವಿಮೆ ಮಾಡಿಸಲು ಜುಲೈ 31 ಕೊನೆ ದಿನವಾಗಿದ್ದು, ರೈತರು ಹತ್ತಿರದ ಗ್ರಾಮ ಒನ್, ಸಿಎಸ್ಸಿ ಕೇಂದ್ರ, ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಬೆಳೆ ವಿಮೆಯ ನೋಂದಣಿ ಮಾಡಿಸಬೇಕು ಎಂದು ಸೈದಾಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೇನಕಾ ರೈತರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.