ಯಾದಗಿರಿ: ಮಹಾರಾಷ್ಟ್ರದ ರತ್ನಗಿರಿ ಮೂಲದ 20 ವರ್ಷದ ಯುವತಿ ಯಶಿತಾ ಶುಕ್ರವಾರ ನಗರದಲ್ಲಿ ಜೈನ ಧರ್ಮದ ‘ವಿಧೇಯ ದೀಕ್ಷೆ’ ಪಡೆದರು.
ನಗರದ ಜೈನ ಸಮಾಜದ ಮುಖಂಡ ವಿನಯ ಗಾಂಧಿ ಅವರ ಪತ್ನಿಯ ತಂಗಿ ಮೀನಾಕುಮಾರಿ ಹಾಗೂದೀಪಕ್ ಕುಮಾರ ದಂಪತಿಯ ಏಕೈಕ ಪುತ್ರಿ ಯಶಿತಾ ಬಿ.ಕಾಂ ಪದವಿ ಪಡೆದಿದ್ದಾರೆ.
ನಗರದ ಹೊಸಳ್ಳಿ ಕ್ರಾಸ್ನಿಂದ ಶುಭಂ ಪೆಟ್ರೋಲ್ ಬಂಕ್ ಸಮೀಪದ ಜೈನ ಮಂದಿರದ ವರೆಗೆ ಮೆರವಣಿಗೆ ನಡೆಸಲಾಯಿತು.ಜೈನ ಮಂದಿರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.
‘ಸನ್ಯಾಸತ್ವದ ಪೂರ್ಣ ಪ್ರಮಾಣದ ದೀಕ್ಷೆ2021 ಮಾರ್ಚ್ 21 ರಂದು ಪುಣೆಯಲ್ಲಿ ನಡೆಯಲಿದೆ’ಎಂದು ಜೈನ ಸಮಾಜದಮುಖಂಡ ವಿನಯ ಗಾಂಧಿ ಹೇಳಿದರು.
ಈ ವೇಳೆ ಸಮುದಾಯದ ಮುಖಂಡರಾದ ಅನಿಲಕುಮಾರ ಕುಂದನ್ಮಲ್ ಗಾಂಧಿ, ದೇವೀಂದ್ರ ಕುಮಾರ, ಅರವಿಂದ ಕುಮಾರ ಗಾಂಧಿ,ಪರಸ್ಮಾಲ್ ಬಂಢಾರಿ, ರಮೇಶ ಕಾಂಗಟಾನಿ, ವಿನೋದ ಬಂಢಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.