ADVERTISEMENT

ಸೈದಾಪುರ: ಸಾಮಾಜಿಕ ನ್ಯಾಯಕ್ಕೆ ಹೋರಾಡಿದ ಮಹಾನಾಯಕ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 7:18 IST
Last Updated 15 ಏಪ್ರಿಲ್ 2023, 7:18 IST
ಸೈದಾಪುರದ ರೈಲ್ವೆ ಗೇಟ್ ಬಳಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖಂಡರು ಧ್ವಜಾರೋಹಣ ನೆರವೇರಿಸಿ ಪ್ರಾರ್ಥನೆ ಮಾಡಿದರು
ಸೈದಾಪುರದ ರೈಲ್ವೆ ಗೇಟ್ ಬಳಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖಂಡರು ಧ್ವಜಾರೋಹಣ ನೆರವೇರಿಸಿ ಪ್ರಾರ್ಥನೆ ಮಾಡಿದರು   

ಸೈದಾಪುರ: ‘ಅಂಬೇಡ್ಕರ್ ಅವರು ತತ್ವ ಆದರ್ಶಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ಮಹಾನಾಯಕ’ ಎಂದು ಮುಖಮಡ ಶ್ರೇಣಿಕ ಕುಮಾರ ದೋಕಾ ಅಭಿಪ್ರಾಯಪಟ್ಟರು.

ಪಟ್ಟಣದ ರೈಲ್ವೆ ಗೇಟ್ ಬಳಿ ಇರುವ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಅಂಬೇಡ್ಕರ ಜಯಂತಿ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಸಂವಿಧಾನ ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಯೂ ಇತರರಂತೆ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಬರೆದ ಮಾಹಾ ಗ್ರಂಥ. ಅಂಬೇಡ್ಕರ್‌ ಅವರು ಒಂದು ಜಾತಿ, ಒಂದು ಜನಾಂಗಕ್ಕಾಗಿ ದುಡಿಯಲಿಲ್ಲ. ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ಕಾನೂನುಗಳ ಮೂಲಕ ಸಾಧ್ಯ ಎಂಬುದನ್ನು ಅರಿತು ಅವರು ಸಂವಿಧಾನವನ್ನು ಬರೆದರು’ ಎಂದು ತಿಳಿಸಿದರು.

ADVERTISEMENT

ನರಸಪ್ಪ ಕವಡೆ ಬದ್ದೇಪಲ್ಲಿ ಮಾತನಾಡಿದರು.

ನೇತ್ರಾವತಿ, ಚಂದ್ರಶೇಖರ್ ವಾರದ, ಬಸ್ಸುಗೌಡ ಐರೆಡ್ಡಿ, ಮಹಿಪಾಲರೆಡ್ಡಿ ದುಪ್ಪಲ್ಲಿ, ನಿರಂಜನರೆಡ್ಡಿ ಪಾಟೀಲ ಶೆಟ್ಟಿಹಳ್ಳಿ, ಗುರುನಾಥರೆಡ್ಡಿಗೌಡ ರೊಟ್ನಡಗಿ, ರಾಜೇಶ ಶೆಟ್ಟಿ, ರಾಜು ದೊರೆ, ವಲಿಯೋದ್ದೀನ್, ಹಣಮಂತ, ಚಂದ್ರಶೇಖರ ಕರಣಿಗಿ, ಭೀಮರಾಯ ಕೊಟಗೇರಾ ಬಳಿಚಕ್ರ, ಸಾಬಣ್ಣ ಗುತ್ತೇದಾರ ಸೈದಾಪುರ, ಕಾಶಪ್ಪ, ವೆಂಕಟೇಶ ಮೇತ್ರಿ, ನರಸಪ್ಪ ನಾಯಕ. ಮಾರೆಪ್ಪ ನಾಯಕ ಇಂದಿರಾನಗರ, ಮಲ್ಲರೆಡ್ಡಿ ಪಾಟೀಲ, ಮರೆಪ್ಪ ಕಟ್ಟಿಮನಿ, ಭೀಮಣ್ಣ ಮಡಿವಾಳಕರ್, ಅನಿಲ್ ಭಾಸ್ಕರ್, ನರಸಿಂಗ್ ಕೋರೆ, ಇಮಾಮ್ ಹೆಗ್ಗಣಗೇರಾ, ದೇವಿಂದ್ರಪ್ಪ ಕೂಡ್ಲೂರು, , ಮಹಿಪಾಲರೆಡ್ಡಿ ಮುನಗಾಲ, ನೀಲಕಂಠರೆಡ್ಡಿ, ಮರಿಲಿಂಗ, ನಾಗಪ್ಪ, ಮರಿಲಿಂಗ, ತಾಯಪ್ಪ, ಶಂಕರ, ಆನಂದ, ಕಾಳಪ್ಪ, ಹಣಮಂತ, ಶರಣಪ್ಪ ಶೆಟ್ಟಿಹಳ್ಳಿ, ಮಲ್ಲು ಸಂಗವಾರ, ಮಲ್ಲಪ್ಪ, ಸಂತೋಷ ಬಡಿಗೇರ, ಚೆನ್ನಮಲ್ಲಪ್ಪ, ಷಣ್ಮುಖ ಬಡಿಗೇರ, ಸಾಗರ, ರಾಘವೇಂದ್ರ, ಸತೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.