ADVERTISEMENT

ಅರಕೇರಾ ಸಿದ್ದಲಿಂಗ ಶ್ರೀಗಳು ಲಿಂಗೈಕ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 14:35 IST
Last Updated 21 ಆಗಸ್ಟ್ 2020, 14:35 IST
ಸಿದ್ದಲಿಂಗ ಶ್ರೀಗಳು
ಸಿದ್ದಲಿಂಗ ಶ್ರೀಗಳು   

ಗುರುಮಠಕಲ್:ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮ ಮಠದ ಸಿದ್ದಲಿಂಗ ಶ್ರೀಗಳು (48) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮಠದ ವಕ್ತಾರರು ತಿಳಿಸಿದ್ದಾರೆ. ಶ್ರೀಗಳ ಅಂತಿಮ ವಿಧಿವಿಧಾನಗಳನ್ನು ಶನಿವಾರ ಆಶ್ರಮದ ಆವರಣದಲ್ಲಿ ನೆರವೇರಿಸಲಾಗುವುದುಎಂದು ತಿಳಿಸಿದ್ದಾರೆ.

ಶ್ರೀಗಳು ಗುರುಮಠಕಲ್ ತಾಲ್ಲೂಕಿನ ಬಾಚವಾರ ಗ್ರಾಮದಲ್ಲಿ 1972 ಅಕ್ಟೋಬರ್ 2 ರಂದು ಜನಿಸಿದ್ದರು. ಯಾದಗಿರಿ ಹಾಗೂ ಹುಬ್ಬಳ್ಳಿ ಸಿದ್ದಾರೂಢರ ಮಠದಲ್ಲಿ ಅಭ್ಯಾಸ ಮಾಡಿದ್ದರು. ನಂತರ ಅರಕೇರಾ (ಕೆ) ಗ್ರಾಮದಲ್ಲಿ ಸಿದ್ದಾರೂಢರ ಆಶ್ರಮಕ್ಕೆ ಸಂಸ್ಥಾಪಕ ಪೀಠಾಧಿಪತಿಯಾಗಿದ್ದರು ಎಂದು ಮಠದ ಭಕ್ತರುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT