ADVERTISEMENT

ಯಾದಗಿರಿ: ಭಾರತ ಬಂದ್‌ ಬೆಂಬಲಿಸಿ ಸೌಹಾರ್ದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 15:57 IST
Last Updated 26 ಸೆಪ್ಟೆಂಬರ್ 2021, 15:57 IST
ಯಾದಗಿರಿಯ ಎಸ್‍ಯುಸಿಐ (ಸಿ) ಸಿಪಿಐ (ಎಂ) ಸಿಪಿಐ ಎಡ ಪಕ್ಷಗಳಿಂದ ಜಂಟಿಯಾಗಿ ಸೌಹಾರ್ದ ಪ್ರದರ್ಶನವನ್ನು ನಗರದ ಸುಭಾಷ್‍ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಸ್‍ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ದಾವಲಸಾಬ್ ನದಾಫ್ ಇದ್ದರು
ಯಾದಗಿರಿಯ ಎಸ್‍ಯುಸಿಐ (ಸಿ) ಸಿಪಿಐ (ಎಂ) ಸಿಪಿಐ ಎಡ ಪಕ್ಷಗಳಿಂದ ಜಂಟಿಯಾಗಿ ಸೌಹಾರ್ದ ಪ್ರದರ್ಶನವನ್ನು ನಗರದ ಸುಭಾಷ್‍ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಸ್‍ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ದಾವಲಸಾಬ್ ನದಾಫ್ ಇದ್ದರು   

ಯಾದಗಿರಿ: ಭಾರತ ಬಂದ್ ಬೆಂಬಲಿಸಿ ಸಿಪಿಎಂ, ಎಸ್‌ಯುಸಿಐ, ಸಿಪಿಐ ಪಕ್ಷಗಳಿಂದ ಜಂಟಿಯಾಗಿ ನಗರದ ಸುಭಾಷ್‍ ವೃತ್ತದಲ್ಲಿ ಸೌಹಾರ್ದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಮುಖಂಡರು, ಸೆಪ್ಟೆಂಬರ್ 27ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಮತ್ತು ರೈತ ಹಾಗೂ ಕಾರ್ಮಿಕರ ಮತ್ತು ಎಲ್ಲ ನಾಗರೀಕರ ವಿರುದ್ಧವಾದ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಭಾರತ್‌ ಬಂದ್‌ ನಡೆಸಲಿವೆ ಎಂದರು.

ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ರೈತ ವಿರೋಧಿಯಾದ ಭೂಸುಧಾರಣಾ ತಿದ್ದುಪಡಿ ಕಾಯ್ದೆ-2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಹಾಗೂ ಹೈನುಗಾರರ ಮತ್ತು ಹೈನೋದ್ಯಮದ ವಿರೋಧಿಯಾದ ಹಾಗೂ ಬಹುಸಂಖ್ಯಾತರ ಆಹಾರದ ಹಕ್ಕನ್ನು ನಿರಾಕರಿಸುವ ಜಾನುವಾರು ಹತ್ಯಾ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ಮತ್ತು ರಾಜ್ಯದ ಶೇ 95ರಷ್ಟು ಜನತೆಯ ವಿರೋಧಿಯಾದ ಲೂಟಿಕೋರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ-2020 ಜಾರಿಯನ್ನು ಅಧಿವೇಶನದಲ್ಲಿಯೇ ವಾಪಸ್ ಪಡೆಯಬೇಕೆಂದು ಎಡ ಪಕ್ಷಗಳ ಜಿಲ್ಲೆಯ ಸಂಘಟನಾ ಸಮಿತಿಗಳು ಒಕ್ಕೊರಲಿನಿಂದ ಒತ್ತಾಯಿಸುತ್ತವೆ ಎಂದರು.

ADVERTISEMENT

ಈ ವೇಳೆ ಎಸ್‍ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ದಾವಲಸಾಬ್ ನದಾಫ್, ಮುಂಖಡರಾದ ಡಿ.ಉಮಾದೇವಿ, ಜೈಲಾಲ್ ತೋಟದಮನಿ, ರಾಮಲಿಂಗಪ್ಪ ಬಿ.ಎನ್, ಬಸವರಾಜ ದೊರೆ, ಜಮಾಲ್ ಸಾಬ್, ಗಣೇಶ ಅನವಾರ, ದೇವಿಂದ್ರಪ್ಪ, ಬಸವರಾಜ ಚಿಕ್ಕಬಾನರ್, ದೇವಿಂದ್ರ, ರಾಜೇಶ್ವರಿ, ನಾಗರಾಜ, ದೊಡ್ಡಪ್ಪಗೌಡ, ಮಹ್ಮದ್ ಅಶ್ರಫ್, ಯಲ್ಲೇಶ್, ಸಾಬರಡ್ಡಿ, ಯಲ್ಲಾಲಿಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.