ADVERTISEMENT

ಯಾದಗಿರಿ: ಮತ್ತೆ 18 ಜನರಿಗೆ ಕೊರೊನಾ ಪಾಸಿಟಿವ್, ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2020, 15:31 IST
Last Updated 30 ಮೇ 2020, 15:31 IST
ಸೈದಾಪುರ ಸಮೀಪದ ವಸತಿ ನಿಲಯದಲ್ಲಿರುವ ವಲಸೆ ಕಾರ್ಮಿಕರನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಇದ್ದರು
ಸೈದಾಪುರ ಸಮೀಪದ ವಸತಿ ನಿಲಯದಲ್ಲಿರುವ ವಲಸೆ ಕಾರ್ಮಿಕರನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಇದ್ದರು   

ಯಾದಗಿರಿ: ಜಿಲ್ಲೆಯಲ್ಲಿ ಮೇ 30ರಂದು ಶನಿವಾರ 5 ವರ್ಷದೊಳಗಿನ 3 ಮಕ್ಕಳು ಸೇರಿದಂತೆ ಒಟ್ಟು 18 ಜನರಿಗೆ ಕೋವಿಡ್‌–19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 241 ಪ್ರಕರಣಗಳ ಪೈಕಿ 11 ಜನ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಪುಟಪಾಕ್ ಗ್ರಾಮದ 29 ವರ್ಷದ ಪುರುಷ (ಪಿ-2797), ಪುಟಪಾಕ್ ಗ್ರಾಮದ 20 ವರ್ಷದ ಮಹಿಳೆ (ಪಿ-2798), ಗುರುಮಠಕಲ್‍ನ 45 ವರ್ಷದ ಪುರುಷ (ಪಿ-2799), ಗುರುಮಠಕಲ್‍ನ 40 ವರ್ಷದ ಮಹಿಳೆ (ಪಿ-2800), ಗುರುಮಠಕಲ್ ತಾಲ್ಲೂಕಿನ ಕೇಶ್ವಾರ್ ಗ್ರಾಮದ 43 ವರ್ಷದ ಪುರುಷ (ಪಿ-2801), ಕೇಶ್ವಾರ್ ಗ್ರಾಮದ 19 ವರ್ಷದ ಯುವಕ (ಪಿ-2802), ಕೇಶ್ವಾರ್ ಗ್ರಾಮದ 11 ವರ್ಷದ ಬಾಲಕ (ಪಿ-2803), ಪದ್ದೇಪಲ್ಲಿ ಗ್ರಾಮದ 39 ವರ್ಷದ ಪುರುಷ (ಪಿ-2804), ಮದ್ದೇಪಲ್ಲಿ ಗ್ರಾಮದ 32 ವರ್ಷದ ಪುರುಷ (ಪಿ-2805) ಸೋಂಕಿತರಾಗಿದ್ದಾರೆ.

ಯಾದಗಿರಿ ತಾಲ್ಲೂಕಿನ ಅರಕೇರಾ ಬಿ. ಗ್ರಾಮದ 66 ವರ್ಷದ ಪುರುಷ (ಪಿ-2809), ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ 17 ವರ್ಷದ ಯುವತಿ (ಪಿ-2810), ಯಾದಗಿರಿ ತಾಲ್ಲೂಕಿನ ಅರಕೇರಾ ತಾಂಡಾದ 30 ವರ್ಷದ ಪುರುಷ (ಪಿ-2811), ಅರಕೇರಾ ತಾಂಡಾದ 7 ವರ್ಷದ ಹೆಣ್ಣುಮಗು (ಪಿ-2812), ಅರಕೇರಾ ತಾಂಡಾದ 3 ವರ್ಷದ ಹೆಣ್ಣುಮಗು (ಪಿ-2813), ಅರಕೇರಾ ತಾಂಡಾದ 2 ವರ್ಷದ ಬಾಲಕ(ಪಿ-2814), ಅರಕೇರಾ ತಾಂಡಾದ 1 ವರ್ಷದಬಾಲಕಿ(ಪಿ-2815), ಕೊಲಮಪಲ್ಲಿ ಗ್ರಾಮದ 19 ವರ್ಷದ ಯುವಕ (ಪಿ-2816), ಕೊಲಮಪಲ್ಲಿ ಗ್ರಾಮದ 16 ವರ್ಷದ ಯುವತಿ (ಪಿ-2817) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ADVERTISEMENT

ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದವರು. ಈ 18 ಜನರನ್ನು ಗುರುಮಠಕಲ್‍ನ ಎಸ್‌ಟಿ ಹಾಸ್ಟೆಲ್, ಗುರುಮಠಕಲ್‍ನ ಎಸ್‌ಎಲ್‌ಟಿ, ಯಾದಗಿರಿಯ ಡಾನ್ ಬಾಸ್ಕೋ ಶಾಲೆ, ಮಾತರ್ ತೆಲಂಗಾಣ ಹಾಗೂ ಲಿಂಗೇರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.