ADVERTISEMENT

ಯಕ್ಷಂತಿ ಬಳಿ ಮೊಸಳೆ ದಾಳಿ: ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 13:52 IST
Last Updated 27 ಸೆಪ್ಟೆಂಬರ್ 2021, 13:52 IST
ಮೊಸಳೆ (ಸಾಂದರ್ಭಿಕ ಚಿತ್ರ)
ಮೊಸಳೆ (ಸಾಂದರ್ಭಿಕ ಚಿತ್ರ)   

ವಡಗೇರಾ: ತಾಲ್ಲೂಕಿನ ಯಕ್ಷಂತಿ ಗ್ರಾಮದಲ್ಲಿ ಕೃಷ್ಣಾ ನದಿಯೊಳಗೆ ನೀರು ಕುಡಿಯಲು ಹೋಗಿದ್ದ ಮೇಕೆ ಮೇಲೆ ಮೊಸಳೆ ದಾಳಿ ಮಾಡಿದ್ದರಿಂದ ಮೇಕೆ ಸಾವನ್ನಪ್ಪಿದ್ದ ಘಟನೆ ಭಾನುವಾರ ನಡೆದಿದೆ.

ಗ್ರಾಮದ ಹುಸೇನ್ ಸಾಬ್ ಜಲಾಲ್ ಸಾಬ್ ಎಂಬುವವರ ಮೇಕೆ ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮೊಸಳೆ ದಾಳಿ ಬಗ್ಗೆ ಆತಂಕ ಹೆಚ್ಚಾಗಿದೆ.

ಸದ್ಯ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮೊಸಳೆಗಳು ಪ್ರತ್ಯಕ್ಷವಾಗುತ್ತಿವೆ. ಕೆಲ ತಿಂಗಳ ಹಿಂದೆ ಕುರಿಗಳನ್ನು ಸ್ನಾನ ಮಾಡಿಸಲು ಹೋಗಿದ್ದ ಕುರಿಗಾಹಿ ಮೇಲೆ ಮೊಸಳೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಮಾಸುವ ಮುನ್ನವೇ ಮತ್ತೆ ಈ ಘಟನೆ ಮರುಕಳಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.