ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರು ಸಮುದಾಯ ಹಿತಕ್ಕೆ ಶ್ರಮಿಸಲು ದೇವರಾಜ ಅರಸು ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:36 IST
Last Updated 18 ಜನವರಿ 2021, 2:36 IST
17ಎಸ್ಎಚ್ಪಿ 1: ಶಹಾಪುರ ನಗರದ ರಾಕಂಗೇರಾದ ಬಾಬು ಜಗಜೀವನರಾಮ್ ಭವನದಲ್ಲಿ ಭಾನುವಾರ ಪರಿಶಿಷ್ಟ ಜಾತಿಯ (ಮಾದಿಗ ಸಮುದಾಯ) ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು
17ಎಸ್ಎಚ್ಪಿ 1: ಶಹಾಪುರ ನಗರದ ರಾಕಂಗೇರಾದ ಬಾಬು ಜಗಜೀವನರಾಮ್ ಭವನದಲ್ಲಿ ಭಾನುವಾರ ಪರಿಶಿಷ್ಟ ಜಾತಿಯ (ಮಾದಿಗ ಸಮುದಾಯ) ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು   

ಶಹಾಪುರ: ‘ಶೋಷಿತ ಸಮಾಜ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಾದರೆ ನೂತನವಾಗಿ ಗ್ರಾಮ ಪಂಚಾಯಿಗೆ ಆಯ್ಕೆಯಾದ ಪರಿಶಿಷ್ಟ ಸಮಾಜದ ಸದಸ್ಯರು ಸಮುದಾಯದ ಹಿತಕ್ಕೆ ಶ್ರಮಿಸಬೇಕು’ ಎಂದು ಕರ್ನಾಟಕ ಮಾದಿಗರ ಸಂಘದ ಅಧ್ಯಕ್ಷ ದೇವರಾಜ ಅರಸು ತಿಳಿಸಿದರು.

ನಗರದ ರಾಕಂಗೇರಾದ ಬಾಬು ಜಗಜೀವನರಾಮ್ ಭವನದಲ್ಲಿ ಭಾನುವಾರ ಕರ್ನಾಟಕ ಮಾದಿಗರ ಸಂಘ ಹಮ್ಮಿಕೊಂಡಿದ್ದ ಮಾದಿಗ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಳಮಟ್ಟದ ಪ್ರಗತಿಗೆ ಪೂರಕವಾದ ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನಮಾನ ಅತ್ಯಂತ ಮಹತ್ವದ್ದಾಗಿದೆ. ಹಳ್ಳಿ ರಾಜಕೀಯ ಗೆದ್ದ ವ್ಯಕ್ತಿ ದೆಹಲಿ ರಾಜಕೀಯ ಮಾಡಬಲ್ಲರು. ಗ್ರಾಮದಲ್ಲಿ ಎಲ್ಲಾ ಸಮುದಾಯದ ಜೊತೆ ಸೌಹಾರ್ದಯುತವಾಗಿ ಕೂಡಿಕೊಂಡು ನಮ್ಮತನ ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಮ್ಮವರನ್ನು ಸನ್ಮಾನಿಸಿರುವುದು ಉತ್ತಮ ಬೆಳವಣಿಗೆ’ ಎಂದರು.

ADVERTISEMENT

ಕರ್ನಾಟಕ ಮಾದಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವುಕುಮಾರ ದೊಡ್ಮನಿ ಹಾಗೂ ಸಮುದಾಯದ ಹಿರಿಯ ಮುಖಂಡರಾದ ಹಣಮಂತ ಕೃಷ್ಣಪ್ಪ ಮಾದಾರ, ಉಪನ್ಯಾಸಕ ಪಂಡಿತ ನಿಂಬೂರ, ವಸಂತ ಸುರಪುರಕರ್, ನಂದಕುಮಾರ ಬಾಂಬೆ.ಭೀಮಾಶಂಕರ ಬಿಲ್ಲಾವ್.ರಾಜಕುಮಾರ ಬಾಸಿಗಿ, ಪ್ರೇಮಾ ಕಲಕೇರಿ,ಸುನೀಲ ಸಲಗರ.ಶಿವಲಿಂಗಪ್ಪ, ಶಾಂತಪ್ಪ ಗುತ್ತೆದಾರ, ಬಸವರಾಜ ನಾಯ್ಕಲ್, ರುದ್ರಪ್ಪ ಹುಲಿಮನಿ, ವಾಸುದೇವ ಕಟ್ಟಿಮನಿ ಮಲ್ಲಿಕಾರರ್ಜುನ ಗುತ್ತೆದಾರ, ಸುನೀಲ ಹಳಿಸಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.