ಯಾದಗಿರಿ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎರಡು ದಂತ ಕುರ್ಚಿಗಳನ್ನು (x-ray ಸಮೇತ) ಸ್ವತಃ ತಾವೇ ಚಿಕಿತ್ಸೆ ಪಡೆಯುವ ಮೂಲಕ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಗುರುವಾರ ಚಾಲನೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ದಂತ ಚಿಕಿತ್ಸೆಯನ್ನು ಉನ್ನತ ಅಧಿಕಾರಿಗಳಾಗಿದ್ದರೂ ತಾವೇ ಚಿಕಿತ್ಸೆ ಪಡೆಯುವ ಮೂಲಕ ಮೊದಲಿಗರಾದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ, ದಂತ ಆರೋಗ್ಯಧಿಕಾರಿ ಡಾ. ಶ್ರೀನಿವಾಸ ಪ್ರಸಾದ, ಡಾ. ಮನಾಲಿ ದೇಶಪಾಂಡೆ, ಕಚೇರಿ ಅಧೀಕ್ಷಕರು ಚಂದಪ್ಪ ಭಾವಿಮನಿ, ಗೋವಿಂದ ಮೂರ್ತಿ ಕಟ್ಟಿಮನಿ, ಶರಣಗೌಡ ಸೇರಿದಂತೆ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.