ADVERTISEMENT

‘ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 4:18 IST
Last Updated 25 ಡಿಸೆಂಬರ್ 2021, 4:18 IST
ಕೆಂಭಾವಿ ಪಟ್ಟಣದ ವಾರ್ಡ್ ನಂ.16ರ ಆಶ್ರಯ ಕಾಲೊನಿಯಲ್ಲಿ ಅಭ್ಯರ್ಥಿಶ್ರೀಧರ ದೇಶಪಾಂಡೆ ಪರವಾಗಿ ಶರಣಬಸಪ್ಪಗೌಡ ದರ್ಶನಾಪುರ ಪ್ರಚಾರ ನಡೆಸಿದರು
ಕೆಂಭಾವಿ ಪಟ್ಟಣದ ವಾರ್ಡ್ ನಂ.16ರ ಆಶ್ರಯ ಕಾಲೊನಿಯಲ್ಲಿ ಅಭ್ಯರ್ಥಿಶ್ರೀಧರ ದೇಶಪಾಂಡೆ ಪರವಾಗಿ ಶರಣಬಸಪ್ಪಗೌಡ ದರ್ಶನಾಪುರ ಪ್ರಚಾರ ನಡೆಸಿದರು   

ಕೆಂಭಾವಿ: ಹಿಂದುಳಿದವರ ದೀನ ದಲಿತರ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಉದ್ದಾರ ಸಾಧ್ಯ. ಆದ್ದರಿಂದ ಪಟ್ಟಣದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಪಟ್ಟಣದ ವಾರ್ಡ್ ನಂ.16 ರ ಆಶ್ರಯ ಕಾಲೋನಿಯಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ ದೇಶಪಾಂಡೆ ಪರವಾಗಿ ಮತಯಾಚನೆ ಮಾಡಿ
ಅವರು ಮಾತನಾಡಿದರು.

ದೇಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಮಾಜಿಕ ತಳಹದಿ ಮತ್ತು ಸಾಮಾಜಿಕ ನ್ಯಾಯದ ಪರ ಇದ್ದು ಕೆಲಸ ಮಾಡುವ ಪಕ್ಷವಾಗಿದೆ. ಆದ್ದರಿಂದ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತದಾರರು ಮತ್ತೊಮ್ಮೆ ಪುರಸಭೆ ಗದ್ದುಗೆ ಹಿಡಿಯಲು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಶರಣಪ್ಪ ಸಲಾದಪೂರ, ಲಿಂಗನಗೌಡ ಮಾಲಿ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ, ವಾಮನರಾವ್ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಚಿಂಚೋಳಿ, ಕಾಜಾ ಪಟೇಲ್ ಕಾಚೂರ, ಶಿವಮಾಂತ ಚಂದಾಪುರ, ಶರಣಬಸವ (ಕಾಕಾ) ಡಿಗ್ಗಾವಿ, ಅಭ್ಯರ್ಥಿ ಶ್ರೀಧರ ದೇಶಪಾಂಡೆ, ರಂಗಪ್ಪ ವಡ್ಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.