ADVERTISEMENT

ನಾರಾಯಣಪುರ: ಕೃಷ್ಣಾ ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯಕ್ಕೆ ಮುಂದುವರಿದ ಒಳಹರಿವು 

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 13:39 IST
Last Updated 25 ಜುಲೈ 2024, 13:39 IST
ನಾರಾಯಣಪುರ ಬಸವಸಾಗರ ಜಲಾಶಯದ 25 ಕ್ರಸ್ಟಗೇಟ್‌ಗಳ ಮೂಲಕ ಧುಮ್ಮಿಕ್ಕುವ ಜಲಧಾರೆಯ ದೃಶ್ಯ
ನಾರಾಯಣಪುರ ಬಸವಸಾಗರ ಜಲಾಶಯದ 25 ಕ್ರಸ್ಟಗೇಟ್‌ಗಳ ಮೂಲಕ ಧುಮ್ಮಿಕ್ಕುವ ಜಲಧಾರೆಯ ದೃಶ್ಯ   

ನಾರಾಯಣಪುರ:ಇಲ್ಲಿನ ಬಸವಸಾಗರ ಜಲಾಶಯದ 25 ಕ್ರಸ್ಟಗೇಟ್‌ಗಳ ಮೂಲಕ 2.50 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಕೃಷ್ಣಾ ನದಿ ಹರಿಸಲಾಗುತ್ತಿದೆ. 

ಗುರುವಾರವೂ ಆಲಮಟ್ಟಿ ಜಲಾಶಯದಿಂದ 2.40 ಲಕ್ಷ ಕ್ಯುಸೆಕ್ ಪ್ರಮಾಣದಷ್ಟು ನೀರಿನ ಒಳಹರಿವು ಮುಂದುವರಿದಿದೆ. ಒಳಹರಿವು ತಗ್ಗಿದರೆ ಹೊರ ಹರಿವು ಕಡಿಮೆಗೊಳಿಸಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಇಇ ಅಶೋಕರೆಡ್ಡಿ ಪಾಟೀಲ ಮಾಹಿತಿ ನೀಡಿದ್ದಾರೆ.

ಗರಿಷ್ಠ 492.25 ಮೀಟರ್‌ ಎತ್ತರದ ಜಲಾಶಯದಲ್ಲಿ ಗುರುವಾರ 490.68 ಮೀಟರ್‌ಗೆ ನೀರು ತಲುಪಿದ್ದು, 26.584 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ.

ADVERTISEMENT

ವಿದ್ಯುತ್ ಉತ್ಪಾದನೆ: ಜಲಾಶಯಕ್ಕೆ ಹೊಂದಿಕೊಂಡಿರುವ ಎಂಪಿಸಿಎಲ್ ಜಲವಿದ್ಯುತ್ ಸ್ಥಾವರದಿಂದ 12 ಮೆಗಾವಾಟ್ ವಿದ್ಯುತ್ ಉತ್ಪಾದನೆಯೊಂದಿಗೆ 6 ಸಾವಿರ ಕ್ಯುಸೆಕ್ ನೀರನ್ನು ಬಳಿಸಿ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದ ಬೋರುಕಾ ಜಲವಿದ್ಯುತ್ ಸ್ಥಾವರದಿಂದಲೂ 24 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರ25ಎನ್ಆರ್ಪಿ01ನಾರಾಯಣಪುರ ಬಸವಸಾಗರ ಜಲಾಶಯದ 25 ಕ್ರಸ್ಟಗೇಟ್ಗಳಿಂದ ಧುಮ್ಮಿಕ್ಕುವ ಜಲಧಾರೆಯ ಆಕರ್ಶಕ ನೋಟ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.