ADVERTISEMENT

ಭಾಷಣದುದ್ದಕ್ಕೂ ಕನ್ನಡ ತಪ್ಪು ಉಚ್ಚರಿಸಿದ ಸಚಿವರು!

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 7:44 IST
Last Updated 17 ಸೆಪ್ಟೆಂಬರ್ 2020, 7:44 IST
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ರಾಷ್ಟ್ರ ಧ್ವಜರೋಹರಣ ನೆರವೇರಿಸಿದ ನಂತರ ಭಾಷಣ ಮಾಡಿದರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ರಾಷ್ಟ್ರ ಧ್ವಜರೋಹರಣ ನೆರವೇರಿಸಿದ ನಂತರ ಭಾಷಣ ಮಾಡಿದರು   

ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ನಗರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರ ಧ್ವಜಾರೋಹರಣ ನೆರವೇರಿಸಿದಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಭಾಷಣದುದ್ದಕ್ಕೂ ಕನ್ನಡ ಭಾಷೆಯನ್ನು ತಪ್ಪು ತಪ್ಪಾಗಿ ಉಚ್ಚರಿಸಿದರು.

ಸರ್ದಾರ್ ವಲ್ಲಭಭಾಯ್‌ ಪಟೇಲ್‌ ಎನ್ನುವ ಬದಲು ಸರ್ದಾರ್ ವಲ್ಲಭಭಾಯ್‌ ಪಾಟೀಲರನ್ನು ನೆನಸಿಕೊಳ್ಳಬೇಕು ಎಂದು ತಪ್ಪಾಗಿಉಚ್ಚರಿಸಿದರು.

ಸ್ವಾತಂತ್ರ್ಯ ಬದಲು ಸ್ವಾಸಂತ್ರ ಎಂದು ಉಚ್ಚರಿಸಿದರು.ಕಡಲೆ ಬೇಳೆ ಬದಲಾಗಿಬೆಲೆ ವಿತರಿಸಲಾಗಿದೆ ಎಂದರು.ಇದ್ದಾರೆ ಎನ್ನುವ ಬದಲು ಇದ್ದಾರಾ ಎಂದರು.

ADVERTISEMENT

ಸರ್ಕಾರವೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಎಂದು ಆಚರಿಸುತ್ತಿದ್ದರೂ ವಿಮೋಚನಾ ದಿನಾಚರಣೆ ಎಂದು ಹಲವಾರು ಬಾರಿ ಉಚ್ಚರಿಸಿದರು. ಪರಿಚಯ ಬದಲಾಗಿ ಪರಿಷಯ ಮಾಡಿಕೊಡಬೇಕು ಎಂದರು.

ಪ್ರತಿಯೊಬ್ಬರ ಬದಲಾಗಿ ಪ್ರತಿಯೊಬ್ಬ ಪಾತ್ರ ಮುಖ್ಯ ಎಂದರು.ಆಚರಣೆ ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಬದಲಾಗಿಕೊಂತಿದಿವಿ, ಹೀಗೆ ಅನೇಕ ತಪ್ಪುತಪ್ಪಾದ ಉಚ್ಚಾರ ಮಾಡಿದರು.

ಕಲ್ಯಾಣ ಕರ್ನಾಟಕ ಕನಸು ನನಸು ಮಾಡಿಕೊಳ್ಳಬೇಕು ಎನ್ನುವ ಬದಲಾಗಿ ನೆನಸು ಆಗಬೇಕು ಎಂದರು.

ಯಾದಗಿರಿ ಜಿಲ್ಲೆ ಆರ್ಥಿಕ ಸಮೀಕ್ಷೆಯಲ್ಲಿ 28–30ನೇ ಸ್ಥಾನದಲ್ಲಿ ಇದೆ ಎಂದರು.

‘ಮನಸ್ಸಲ್ಲಿ ಇದ್ದಿದ್ದೂ ದೇವಿ ಬಳಿ ಬೇಡಿಕೊಂಡಿದ್ದೇನೆ’

ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಲ ಗಡೇ ದುರ್ಗಾದೇವಿ ದೇವಸ್ಥಾನದಲ್ಲಿ ‘ಉಪಮುಖ್ಯಮಂತ್ರಿ’ ಮಾಡಿ ಎಂದು ಪತ್ರ ಬರೆದು ದೇವಿಗೆ ಮನವಿ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ದೇವಿ ಶಕ್ತಿ ಬಗ್ಗೆ ತಿಳಿದುಕೊಂಡಿದ್ದೇನೆ. ಹೀಗಾಗಿ ಮನಸ್ಸಿನಲ್ಲಿ ಇರುವುದನ್ನು ಪತ್ರದಲ್ಲಿ ಬರೆದು ದೇವಿ ಪಾದಕ್ಕೆ ಮೊರೆ ಇಟ್ಟಿದ್ದೇನೆ ಎಂದರು.

ದೇವಿ ಬಳಿ ಕೇಳಿಕೊಂಡಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಬಾರದು. ದೇವಿ ಶಕ್ತಿ ಬಗ್ಗೆ ಸ್ನೇಹಿತರೊಬ್ಬರು ಹೇಳಿದ್ದರು.ಹೀಗಾಗಿದೇವಿ ದರ್ಶನ ಪಡೆದಿದ್ದೇನೆ.ಡಿಎಂಸಿ ಮಾಡೋದು ಬಿಡೋದು ಸಿಎಂ ಅವರ ವಿವೇಚನೆಗೆ ಬಿಟ್ಟ ವಿಚಾರ.ಡಿಸಿಎಂ ಪಟ್ಟದ ಬಗ್ಗೆ ಈಗ ಮಾತನಾಡುವಸಂದರ್ಭ ಅಲ್ಲ.ಕೊರೊನಾ ವಿರುದ್ಧ ಹೋರಾಡುವ ಸಂದರ್ಭ ಇದು ಎಂದರು.

ಆಧುನಿಕ ಸೌಲಭ್ಯವುಳ್ಳ ಆ್ಯಂಬುಲೆನ್ಸ್‌ಗಾಗಿ ಟೆಂಡರ್‌ ಆಗಿದೆ. ಜಿಪಿಎಸ್‌, ಆಕ್ಸಿಜನ್‌ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ2,000 ಸಾವಿರ ಆ್ಯಂಬುಲೆನ್ಸ್‌ಗಳು ಮುಂದಿನ ತಿಂಗಳಿಂದ ಸಿಗಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.