ನಾರಾಯಣಪುರ: ಅಭಿವೃದ್ಧಿ ಸಹಿಸಲಾಗದೆ ನನ್ನ ಮೇಲೆ ವಿನಾಕಾರಣ ಟೀಕೆಗಳನ್ನು ಮಾಡುತ್ತಿರುವ ವಿರೋಧ ಪಕ್ಷದವರಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕವೇ ಉತ್ತರ ನೀಡುತ್ತೇನೆ ಎಂದು ಶಾಸಕ (ನರಸಿಂಹನಾಯಕ) ರಾಜೂಗೌಡ ಹೇಳಿದರು.
ಸಮೀಪದ ಅಮ್ಮಾಪೂರ ಎಸ್.ಕೆ ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ನೂರಾರು ಕೋಟಿ ರೂ.ಗಳ ಅನುದಾನ ತರುವ ಮೂಲಕ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ತಾಲೂಕಿನ ಅಭಿವೃದ್ಧಿ ನೋಡಿ ಸಹಿಸದ ಕೆಲವರು ಇಲ್ಲದ ಮಾತುಗಳನ್ನು ಆಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಕಡೆಗೆ ಯೋಚಿಸದೆ ಇಂದು ನಾವು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡುವ ಪ್ರತಿಪಕ್ಷದವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಹೇಳಿದರು.
ಅಮ್ಮಾಪೂರ ಎಸ್.ಕೆ ಗ್ರಾಮದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪ ಡೆಯಾದರು. ಈ ವೇಳೆ ಎಚ್.ಸಿ.ಪಾಟೀಲ, ಗದ್ದೆಪ್ಪ ಪೂಜಾರಿ, ಯಲ್ಲಪ್ಪ ಕುರಕುಂದಿ, ಬಸನಗೌಡ ಅಳ್ಳಿಕೋಟಿ, ವೆಂಕಟೇಶ ಸಾಹುಕಾರ, ಮಲ್ಲು ನವ ಲಗುಡ್ಡ, ಸಂಗಮೇಶ ಹೂಗಾರ, ಬಸವರಾಜ, ಬಿ.ಸಿ.ಪಾಟೀಲ, ದುರ್ಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.