ADVERTISEMENT

ಮೂರು ಹೊಸ ಬಸ್‌ಗಳ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:53 IST
Last Updated 26 ಡಿಸೆಂಬರ್ 2025, 5:53 IST
ಯಾದಗಿರಿ ನಗರದ ಕೇಂದ್ರ ‌ಬಸ್ ನಿಲ್ದಾಣದಲ್ಲಿ ಈಚೆಗೆ ನಗರ ಸಾರಿಗೆಯ ಮೂರು ಬಸ್‌ಗಳಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಹಸಿರು ನಿಶಾನೆ ತೋರಿಸಿದರು
ಯಾದಗಿರಿ ನಗರದ ಕೇಂದ್ರ ‌ಬಸ್ ನಿಲ್ದಾಣದಲ್ಲಿ ಈಚೆಗೆ ನಗರ ಸಾರಿಗೆಯ ಮೂರು ಬಸ್‌ಗಳಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಹಸಿರು ನಿಶಾನೆ ತೋರಿಸಿದರು   

ಯಾದಗಿರಿ: ‘ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಮೂರು ನಗರ ಸಾರಿಗೆ ಬಸ್‌ಗಳ ಸಂಚಾರ ಆರಂಭಿಸಲಾಗಿದ್ದು, ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ನಗರದ ಕೇಂದ್ರ ‌ಬಸ್ ನಿಲ್ದಾಣದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಲ್ಟ್‌ ಯೋಜನೆಯಡಿ ಮಂಜೂರು ಆಗಿರುವ 3 ನಗರ ಸಾರಿಗೆ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

‘ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ, ಪ್ರಯಾಣಿಕರ ಅನುಕೂಲಕ್ಕಾಗಿ ಚಾಲನೆ ನೀಡಲಾದ ಹೊಸ ಬಸ್‌ಗಳು ಉಪಯೋಗವಾಗಲಿವೆ’ ಎಂದರು.

ADVERTISEMENT

ಕೆಕೆಆರ್‌ಟಿಸಿ ಡಿಸಿ ಮಂಜುನಾಥ, ಡಿಟಿಒ ವಿ.ಆರ್‌. ರೆಡ್ಡಿ, ಡಿಎಂಇ ಶೇಖ್‌ ಹುಸೇನ್‌, ಡಿಎಂ ರಮೇಶ ಸಿಬ್ಬಂದಿ ಉಪಸ್ಥಿತರಿದ್ದರು.