ADVERTISEMENT

ಕೆಂಭಾವಿ | ನಲ್ಲಿ ಮುರಿದ ವಿಚಾರಕ್ಕೆ ಗ್ರಾಮಸ್ಥರ ಮೇಲೆ ಪಿಡಿಒ ಹಲ್ಲೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 7:48 IST
Last Updated 14 ಅಕ್ಟೋಬರ್ 2023, 7:48 IST
   

ಕೆಂಭಾವಿ (ಯಾದಗಿರಿ ಜಿಲ್ಲೆ): ಜಿಲ್ಲೆಯ ಸುರಪುರ ತಾಲ್ಲೂಕಿನ ಮಲ್ಲಾ ಬಿ ಗ್ರಾಮದಲ್ಲಿ ಶುದ್ಧ ಕುಡಿಯುವ ಘಟಕ ನಲ್ಲಿ ಮುರಿದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಪಂ ಪಿಡಿಒ, ಗ್ರಾಮಸ್ಥರ ಮಧ್ಯೆ ಗಲಾಟೆ ನಡೆದಿದೆ‌.

ಮಲ್ಲಾ ಬಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪುತ್ರಪ್ಪಗೌಡ ಪಾಟೀಲ ಅವರು ಗ್ರಾಮಸ್ಥರಾದ ಸಿದ್ದಪ್ಪ ನಿಂಗಪ್ಪ ದೊಡಮನಿ,

ಶಿವಪ್ಪ ಅಶ್ವತ್ಥ ತಳವಾರ ಇಬ್ಬರ ಮೇಲಯ ಹಲ್ಲೆ ಮಾಡಿದ್ದಾರೆ ಎಂದು ಆರೋಪ‌ ಕೇಳಿ ಬಂದಿದೆ.

ADVERTISEMENT

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿ ಪಿಡಿಒ ಪಾಟೀಲ, 'ಶುದ್ಧ ನೀರಿನ ಘಟಕದ ಸಮಾಗ್ರಿ ಮುರಿದಿದ್ದಾರೆ. ಹೀಗಾಗಿ ಗ್ರಾಮಸ್ಥರು ಬಂದು ನನಗೆ ದೂರು ನೀಡಿದ್ದರು. ನಾನು ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಹೀಗಾಗಿ ನಾನು ಹೊಡೆದಿದ್ದೇ‌ನೆ' ಎಂದು ತಿಳಿಸಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.