ADVERTISEMENT

ವಿದ್ಯುತ್ ಅವಘಡ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 2:01 IST
Last Updated 16 ಮೇ 2021, 2:01 IST
ಗುರುಮಠಕಲ್ ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ರೇಣುಕಾ ಗೋಪಾಲ್ ಅವರ ಮನೆಯಲ್ಲಿ ವಿದ್ಯುತ್ ಅವಘಡದಿಂದ ಉಂಟಾದ ಹಾನಿಯನ್ನು ಕಂದಾಯ ಇಲಾಖೆಯ ವಿಜಯಕುಮಾರ ಪರಿಶೀಲಿಸಿದರು
ಗುರುಮಠಕಲ್ ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ರೇಣುಕಾ ಗೋಪಾಲ್ ಅವರ ಮನೆಯಲ್ಲಿ ವಿದ್ಯುತ್ ಅವಘಡದಿಂದ ಉಂಟಾದ ಹಾನಿಯನ್ನು ಕಂದಾಯ ಇಲಾಖೆಯ ವಿಜಯಕುಮಾರ ಪರಿಶೀಲಿಸಿದರು   

ಗುರುಮಠಕಲ್: ಪಟ್ಟಣದ ಲಕ್ಷ್ಮಿನಗರ ಬಡಾವಣೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಅಪಾರ ಹಾನಿಯಾದ ಅವಘಡ ಶನಿವಾರ ಮಧ್ಯಾಹ್ನ ಜರುಗಿದೆ.

ಬಡಾವಣೆಯ ನಿವಾಸಿ ರೇಣುಕಾ ಗೋಪಾಲ್ ಅವರು ಬೆಳಗ್ಗೆ ಕೂಲಿ ಕೆಲಸಕ್ಕಾಗಿ ಮನೆಗೆ ಬೀಗ ಹಾಕಿ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಆಕಸ್ಮಿಕ ಶಾರ್ಟ್‌ ಸರ್ಕಿಟ್‌ನಿಂದ ಮನೆಯಲ್ಲಿದ್ದ₹1.75 ಲಕ್ಷ ನಗದು ಸೇರಿದಂತೆ ಒಟ್ಟು 6 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಟಿವಿ, 30 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ, ಜೋಳ, ಅಕ್ಕಿ, ಬಟ್ಟೆ, ಫ್ಯಾನ್, ಮಕ್ಕಳ ಶಾಲಾ ದಾಖಲಾತಿಗಳು, ರೇಷನ್ ಹಾಗೂ ಆಧಾರ್ ಕಾರ್ಡ್‌ಗಳು ಸುಟ್ಟಿದ್ದು, ಮನೆಯ ಪತ್ರಾಸ್ ಮೇಲ್ಛಾವಣೆ ಬೆಂಕಿಗೆ ಆಹುತಿಯಾಗಿವೆ ಎಂದು ರೇಣುಕಾ ತಿಳಿಸಿದ್ದಾರೆ.

ADVERTISEMENT

ಹೊಗೆ ಬರುತ್ತಿರುವುದನ್ನು ಕಂಡ ಬಡಾವಣೆ ನಿವಾಸಿಗಳು ಕೂಡಲೆ ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಮನೆಯ ವಿದ್ಯುತ್ ಸಂಪರ್ಕವನ್ನು ಕೂಡಲೆ ನಿಲ್ಲಿಸಿ, ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ವಿಜಯ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.