ಯಾದಗಿರಿ: ಕಳೆದ ಹದಿನೈದು ದಿನದ ಹಿಂದೆ ಬಂದಿದ್ದ ಮಳೆ ಬುಧವಾರ ರಾತ್ರಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ನಗರದಲ್ಲಿ ಮಳೆ ಸುರಿಯಿತು.
ಮಳೆಗಾಗಿ ಎದುರು ನೋಡುತ್ತಿದ್ದ ರೈತರಿಗೆ ಈ ಮಳೆಯಿಂದ ಹರ್ಷ ಪಡುವಂತೆ ಮಾಡಿದೆ. ಬುಧವಾರ ರಾತ್ರಿ ಸುರಿದ ಮಳೆ ಇಳಿಗೆ ತಂಪು ತಂದಿದೆ.
ಬಿತ್ತನೆಗೆ ಭೂಮಿ ಹಸನು ಮಾಡಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಈ ಮಳೆ ಕೊಂಚ ಮಟ್ಟಿಗೆ ಬಿತ್ತನೆಗೆ ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.
ಗುರುಮಠಕಲ್, ವಡಗೇರಾ, ಶಹಾಪುರ ತಾಲ್ಲೂಗಳಲ್ಲಿ ಮೋಡ ಕವಿದ ವಾತಾವರಣ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.