ಯಾದಗಿರಿ:ತಾಲ್ಲೂಕಿನ ಹತ್ತಿಕುಣಿ ಸೌದಾಗರ ಹೆದ್ದಾರಿಯ ತಿರುವಿನಲ್ಲಿ ಬುಧವಾರ ಬೆಳಿಗ್ಗೆ ಡಿವೈಡರ್ಗೆ ಲಾರಿ ಗುದ್ದಿದ ಪರಿಣಾಮ ಡಿವೈಡರ್ ನಾಶವಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾದಗಿರಿಯಿಂದ ಸೇಡಂ ಕಡೆಗೆ ಹೊರಟಿದ್ದ ಲಾರಿ, ತಿರುವಿನಲ್ಲಿ ಚಾಲಕನನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದೆ.
ಅಪಘಾತ ತಿರುವು ಎಂದೇ ಪರಿಗಣಿಸಲಾದ ತಾಲ್ಲೂಕಿನ ಸೌದಾಗರ ತಿರುವಿನ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ಸುರಕ್ಷತಾ ಪ್ರಾಧಿಕಾರ ₹ 80 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದರೂ ವಾಹನ ಅಪಘಾತಗಳು ಸಂಭವಿಸುತ್ತಿರುವುದು ಕಡಿಮೆಯಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.