ADVERTISEMENT

ಹತ್ತಿಕುಣಿ; ಸಹಕಾರ ಸಂಘ ಕಳ್ಳತನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 6:00 IST
Last Updated 20 ಫೆಬ್ರುವರಿ 2023, 6:00 IST
ಯರಗೋಳ ಸಮೀಪದ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಚೇರಿಯ ಕಬ್ಬಿಣದ ಬಾಗಿಲು ಮುರಿದ ಕಳ್ಳರು
ಯರಗೋಳ ಸಮೀಪದ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಚೇರಿಯ ಕಬ್ಬಿಣದ ಬಾಗಿಲು ಮುರಿದ ಕಳ್ಳರು   

ಯರಗೋಳ: ಸಮೀಪದ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಚೇರಿಗೆ ಶನಿವಾರ ಮಧ್ಯೆರಾತ್ರಿ ಕನ್ನ ಹಾಕಲಾಗಿದೆ.

ಕಚೇರಿಯ ಮುಖ್ಯ ಬಾಗಿಲಿಗೆ ಅಳವಡಿಸಿರುವ ಕಬ್ಬಿಣದ ಭದ್ರತಾ ಬಾಗಿಲನ್ನು ಮುರಿದು ಒಳನುಗ್ಗಿ ಹಣ ದೋಚಿ ಪರಾರಿಯಾಗಿದ್ದಾರೆ.

ಭಾನುವಾರ ಬೆಳಗ್ಗೆ ವಿಷಯ ತಿಳಿದ ಸಂಘದ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಸಂಜಿವಕುಮಾರ ಪುಟಗಿ ಕಚೇರಿ ಪರಿಶೀಲಿಸಿ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರಿಗೆ, ‘ರೈತರಿಂದ ಸಾಲ ವಸುಲಾತಿ ಹಾಗು ದಿನಾಲು ಸಣ್ಣ ವ್ಯಾಪಾರರಿಂದ
ಸಂಗ್ರಹಿಸಿ ಇಟ್ಟಿದ ಅಂದಾಜು ₹2.5 ಲಕ್ಷ ಹಣ ಕಳ್ಳತನವಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ರಾಜಕುಮಾರ ಜಾಮಗೊಂಡ, ಬೆರಳಚ್ಚು ‌ತಜ್ಞರು, ಶ್ವನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.

ಪೋಲಿಸ್ ತಂಡ ಬ್ಯಾಂಕ್ ಒಳಗಡೆ ಇರುವ ಸಿಸಿ ಟಿವಿಯಲ್ಲಿ ಸೆರೆಯಾದ‌ 3 ಜನ ಕಳ್ಳರ ಕೈಚಳಕ ದೃಶ್ಯಗಳನ್ನು ಗಮನಿಸಿ ಪರಿಶೀಲನೆ ‌ಮಾಡಿದರು.

ಬ್ಯಾಂಕ್ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್ ಹಾಗೂ ಸಂಘದ ನಿರ್ದೇಶಕರು ರೈತರು ಕಚೇರಿ ಮುಂದೆ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.