ADVERTISEMENT

ಗುರುಮಠಕಲ್: ಚಿನ್ನಾಕಾರ ಗ್ರಾಮದಲ್ಲಿ 8 ಜನರಿಗೆ ಬೇಧಿ, 6 ಗುಣಮುಖ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 8:55 IST
Last Updated 28 ಫೆಬ್ರುವರಿ 2023, 8:55 IST
   

ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಚಿನ್ನಾಕಾರ ಗ್ರಾಮದಲ್ಲಿ ಸೋಮವಾರ 8 ಜನರಲ್ಲಿ ಬೇಧಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.

ಈಚೆಗೆ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ವಾಂತಿ ಬೇಧಿಯಿಂದ ಮೂವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಗ್ರಾಮದಲ್ಲಿ 8 ಜನರಿಗೆ ಬೇಧಿಯಾಗಿದ್ದು, ಆತಂಕದ ವಿಷಯ ಎಂದು ಗ್ರಾಮಸ್ಥರು ಹೇಳಿದರು.

ಸೋಮವಾರ 8 ಜನರಿಗೆ ಬೇಧಿಯಾಗಿದೆ, ಯಾರಿಗೂ ವಾಂತಿಯಾಗಿಲ್ಲ. ಚಿಕಿತ್ಸೆ ಪಡೆದು ಆರು ಜನ ಗುಣಮುಖರಾಗಿದ್ದು, ಉಳಿದ ಇಬ್ಬರೂ ಸಂಜೆ ವೇಳೆಗೆ ಗುಣಮುಖರಾಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ADVERTISEMENT

ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸಮಯದಲ್ಲಿ ನೀರು ಸರಬರಾಜು ಪೈಪ್‌ಲೈನ್‌ ಅಲ್ಲಲ್ಲಿ ಒಡೆದಿದ್ದು, ಅದನ್ನು ದುರಸ್ತಿಗೊಳಿಸದಿರುವುದೇ ಸಮಸ್ಯೆಗೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.