ADVERTISEMENT

ಯಾದಗಿರಿ: 120 ವಲಸಿಗರಿಗೆ ಸೈದಾಪುರದಲ್ಲಿ ಕ್ವಾರಂಟೈನ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 16:52 IST
Last Updated 1 ಜೂನ್ 2020, 16:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾದಗಿರಿ: ಉದ್ಯಾನ್ ಏಕ್ಸ್ ಪ್ರೆಸ್ ಮೂಲಕ ಸೋಮವಾರ ರಾತ್ರಿ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ 120 ವಿದ್ಯಾರ್ಥಿ, ವಲಸಿಗ ಕಾರ್ಮಿಕರನ್ನು ತಾಲ್ಲೂಕಿನ ಸೈದಾಪುರದಲ್ಲಿ ಕ್ವಾರಂಟೈನ್ ಮಾಡಲಾಯಿತು.

ರೈಲು ನಿಲ್ದಾಣದಿಂದ 4 ಬಸ್‌ಗಳ ಮೂಲಕ ರಾಣಿ ಕಿತ್ತೂರ ಚನ್ನಮ್ಮ ವಸತಿ ಶಾಲೆಯ ದಿಗ್ಬಂಧನ ಕೇಂದ್ರಕ್ಕೆ ವಲಸಿಗರನ್ನು ಕಳಿಸಿಕೊಡಲಾಯಿತು.

'ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ವಲಸಿಗರನ್ನು ಕಳಿಸಿಕೊಡಲಾಯಿತು' ಎಂದು ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.