ಯಾದಗಿರಿ:ಜಿಲ್ಲೆಯಲ್ಲಿ ಲಾಕ್ಡೌನ್ ಆದ 45 ದಿನಗಳ ತನಕ ಕೋವಿಡ್ ಪತ್ತೆಯಾಗಿರಲಿಲ್ಲ.ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಜಿಲ್ಲೆಯಲ್ಲಿ ಎಲ್ಲಿಂದಾದರೂ ಕೋವಿಡ್ ಪತ್ತೆಯಾಗುತ್ತದೆ ಎಂಬುದನ್ನು ಅರಿತು ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಊಹಿಸಿದಂತೆ ಮೊದಲು ಇಬ್ಬರಲ್ಲಿ ಕೋವಿಡ್ ಪತ್ತೆಯಾಯಿತು. ಆನಂತರ ಕೋವಿಡ್ ಪೀಡಿತರ ಸಂಖ್ಯೆಏರುತ್ತಲೇ ಇತ್ತು. ಈಗ ನಿಯಂತ್ರಣಕ್ಕೆ ಬಂದಿದೆ.
ರಾತ್ರಿ 9.30ಕ್ಕೆ ಪಾಸಿಟಿವ್ ಬಂದವರ ಕುರಿತು ಬೆಂಗಳೂರಿನಿಂದ ಕರೆ ಬರುತ್ತಿತ್ತು. ಅಲ್ಲಿಗೆ ಮಾಹಿತಿ ನೀಡುತ್ತೇವೆ. ಇನ್ನು ಕ್ವಾರಂಟೈನ್ ಇರುವವರನ್ನು ಪತ್ತೆ ಹಚ್ಚುವುದೇ ಸವಾಲು. ಸೋಂಕಿತರನ್ನು ಗುರುತಿಸಿ ಕೋವಿಡ್ ಆಸ್ಪತ್ರೆಗೆ ಕರೆ ತರಬೇಕಾಗುತ್ತೆ. ಈ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರೂ ನಮ್ಮ ಕರ್ತವ್ಯ ಮಾಡಲೇಬೇಕಾಗಿತ್ತು.
ಕಳೆದ ವರ್ಷ ನನಗೆ ಬೈಪಾಸ್ ಸರ್ಜರಿ ಆಗಿದೆ. ಆದರೂ ಕೆಲಸಮಾಡಲು ಹೆದರಿಲ್ಲ. ನಮ್ಮ ಸಿಬ್ಬಂದಿಗೂ ಭಯಬೇಡ, ಆತ್ಮವಿಶ್ವಾಸ ಇರಲಿ ಎಂದು ಹೇಳುತ್ತೇನೆ. ಲಾಕ್ಡೌನ್ ವೇಳೆ ಮಗಳು ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದಳು. ಆದರೂ ನಿಯಮಗಳನ್ನು ಮೀರಿ ಕರೆಸಿಕೊಳ್ಳಲಿಲ್ಲ.
**
ಇನ್ನು ದಿನಕ್ಕೆ ಹತ್ತಾರು ಸಭೆಗಳು ನಡೆಯುತ್ತವೆ. ವಿಡಿಯೊ ಕಾನ್ಫ್ರೆನ್ಸ್ನಲ್ಲಿ ಭಾಗವಹಿಸಬೇಕಾಗುತ್ತದೆ. ನಾನು ಸೇರಿದಂತೆ ನಮ್ಮ ಸಿಬ್ಬಂದಿ ರಜೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ.
-ಡಾ.ಎಂ.ಎಸ್.ಪಾಟೀಲ, ಡಿಎಚ್ಒ, ಯಾದಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.