ADVERTISEMENT

ಯಾದಗಿರಿ: ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಎಸ್‌ಪಿ ಹೆಸರು ಬದಲಾವಣೆ

‘ಪ್ರಜಾವಾಣಿ’ ವರದಿ ಫಲಶೃತಿ, ಸಾರ್ವಜನಿಕರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 7:13 IST
Last Updated 5 ಸೆಪ್ಟೆಂಬರ್ 2021, 7:13 IST
ಯಾದಗಿರಿ ಜಿಲ್ಲೆಯ ಅಧಿಕಾರಿಗಳ ಸಂಪರ್ಕ ಕೋಶದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೆಸರು ಬದಲಾವಣೆ ಆಗಿದೆ
ಯಾದಗಿರಿ ಜಿಲ್ಲೆಯ ಅಧಿಕಾರಿಗಳ ಸಂಪರ್ಕ ಕೋಶದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೆಸರು ಬದಲಾವಣೆ ಆಗಿದೆ   

ಯಾದಗಿರಿ: ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಮೂರು ತಿಂಗಳಾದರೂ ಬದಲಾಗದ ‘ಎಸ್‌ಪಿ’ ಹೆಸರು ಎನ್ನುವ ಶೀರ್ಷಿಕೆಯಡಿ ಶನಿವಾರ ಪ್ರಕಟವಾಗಿದ್ದ ವಿಶೇಷ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದೆ.

ಋಷಿಕೇಶ ಭಗವಾನ್‌ ಹೆಸರನ್ನು ಬದಲಾಯಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರ ಹೆಸರನ್ನು ಜಾಲತಾಣದಲ್ಲಿ ಅಪ್ಡೇಟ್‌ ಮಾಡಲಾಗಿದೆ. ಇದರಿಂದ ಸಾರ್ವಜನಿಕರ ಗೊಂದಲ ನಿವಾರಣೆಯಾದಂತೆ ಆಗಿದೆ. ಅಧಿಕಾರಿಗಳ ಕೋಶದಲ್ಲಿಯೂ ಅಧಿಕಾರಿಗಳ ಹೆಸರನ್ನು ಸರಿಪಡಿಸಲಾಗಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ಪ್ರಜಾವಾಣಿ’ ವರದಿ ನೋಡಿದ ಅನೇಕರು ಇಂಥ ಸಣ್ಣ ತಪ್ಪುಗಳೇ ಜನರನ್ನು ದಾರಿ ತಪ್ಪಿಸುತ್ತವೆ. ಮೂರು ತಿಂಗಳಾದರೂ ಜಿಲ್ಲೆಯ ಪ್ರಮುಖ ಹುದ್ದೆಯ ಅಧಿಕಾರಿಯ ಹೆಸರನ್ನು ಬದಲಾಯಿಸದೇ ಇರುವುದು ಸರಿಯಲ್ಲ. ಇನ್ನು ಮುಂದೆಯಾದರೂ ಕಾಲಕಾಲಕ್ಕೆ ಅಧಿಕಾರಿಗಳು ಬದಲಾವಣೆ ಆದಾಗ ತಕ್ಷಣವೇ ಸರಿಪಡಿಸುವ ಕೆಲಸ ಆಗಬೇಕು. ವರದಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.