ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವತ್ವುಗಳಹಸ್ತಾಂತರಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರ ನೇತೃತ್ವದಲ್ಲಿ 26 ಸ್ವತ್ತಿನ ಪ್ರಕರಣದಲ್ಲಿ 42 ಜನ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಜನರು ನಿರ್ಲಕ್ಷ್ಯತನವೇ ಕೆಲವೊಮ್ಮೆ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯಿಂದ ರೂಪಿಸಿರುವ ಗೃಹ ಸುರಕ್ಷೆ ಆ್ಯಪ್ ಬಳಸಿ, ತುರ್ತು ಪರಿಸ್ಥಿತಿಯಲ್ಲಿ 112ಗೆ ಕರೆ ಮಾಡುವಂತೆ ತಿಳಿಸಿದರು.
243 ಗ್ರಾಂ ಬಂಗಾರದ ಆಭರಣ, 2,590 ಗ್ರಾಂ ಬೆಳ್ಳಿಯ ಅಭರಣ, 1 ಮಾರುತಿ ಕಾರು, 1 ಅಪ್ಟೆ ಟಂಟಂ, 17 ವಿವಿಧ ಕಂಪನಿಯ ಬೈಕ್, 3 ಲ್ಯಾಪ್ ಟ್ಯಾಪ್, 62 ವಿವಿಧ ಕಂಪನಿಯ ಮೊಬೈಲ್ಗಳು, 19 ಕುರಿಗಳು, ಒಂದು 2 ಎಚ್ಪಿ ಪಂಪ್ಸೆಟ್, 13.58 ಲಕ್ಷ ನಗದು ಹಣವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು ಎಂದರು.
ಈ ವೇಳೆ ಜಿಲ್ಲೆಯ ಪೊಲೀಸರು, ವಾರಸುದಾರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.