ಭಾಗ– 69
941. ‘ತಿಥಿ’ ಕನ್ನಡ ಚಲನಚಿತ್ರದ ನಿರ್ದೇಶಕರು ಯಾರು?
ಎ) ಗಿರೀಶ್ ಕಾಸರವಳ್ಳಿ
ಬಿ) ಗಿರೀಶ್ ಕಾರ್ನಾಡ್
ಸಿ) ನಾಗಾಭರಣ
ಡಿ) ರಾಮರೆಡ್ಡಿ
942. ಸುಭಾಸ್ ಚಂದ್ರ ಬೋಸ್ಗೆ ‘ನೇತಾಜಿ’ಎಂಬ ಬಿರುದು ನೀಡಿದವರು ಯಾರು?
ಎ) ಗಾಂಧೀಜಿ
ಬಿ) ಲೋಕಮಾನ್ಯ ತಿಲಕ್
ಸಿ) ರವೀಂದ್ರನಾಥ ಟ್ಯಾಗೋರ್
ಡಿ) ಗೋಪಾಲಕೃಷ್ಣ ಗೋಖಲೆ
943. ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯನ್ನು ಏನೆಂದು ಆಚರಿಸಲಾಗುತ್ತದೆ?
ಎ) ವಿಶ್ವ ಶಾಂತಿ ದಿನ
ಬಿ) ಕೋಮು ಸೌಹಾರ್ದದಿನ
ಸಿ) ಹುತಾತ್ಮರ ದಿನ
ಡಿ) ಮೇಲಿನ ಯಾವುದೂ ಅಲ್ಲ
944. ‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದವರು ಯಾರು?
ಎ) ಸರೋಜಿನಿ ನಾಯ್ಡು
ಬಿ) ಆನ್ನಿಬೆಸೆಂಟ್
ಸಿ) ಸಿಸ್ಟರ್ ನಿವೇದಿತಾ
ಡಿ) ವಿಜಯಲಕ್ಷ್ಮಿ ಪಂಡಿತ್
945. ‘ಆದಿಪುರಾಣ’ದ ಕರ್ತೃ ಯಾರು?
ಎ) ರನ್ನ
ಬಿ) ಪಂಪ
ಸಿ) ಪೊನ್ನ
ಡಿ) ಜನ್ನ
946. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು?
ಎ) ಏಪ್ರಿಲ್ 13, 1918
ಬಿ) ಏಪ್ರಿಲ್ 13, 1919
ಸಿ) ಏಪ್ರಿಲ್ 13, 1920
ಡಿ) ಏಪ್ರಿಲ್ 20, 1921
947. ಸ್ಮಾರ್ಟ್ ಜಿಲ್ಲೆ ಯೋಜನೆಗೆ ಆಯ್ಕೆಯಾದ ಪ್ರಥಮ ಜಿಲ್ಲೆ ಯಾವುದು?
ಎ) ಉತ್ತರ ಕನ್ನಡ
ಬಿ) ದಕ್ಷಿಣ ಕನ್ನಡ
ಸಿ) ಶಿವಮೊಗ್ಗ
ಡಿ) ಮೈಸೂರು
948. ಅಲ್ಫಾನ್ಸೋ ಮಾವಿನ ತಳಿಯ ತವರು ಯಾವುದು?
ಎ) ವಿಜಯವಾಡಾ
ಬ) ಬನಾರಸ್
ಸಿ) ರತ್ನಗಿರಿ
ಡಿ) ಮೇಲಿನ ಯಾವುದೂ ಅಲ್ಲ
949. ಒಬ್ಬ ವ್ಯಕ್ತಿಯನ್ನು ತೋರಿಸಿ ಒಬ್ಬ ಪುರುಷ ಮಹಿಳೆಗೆ ಹೀಗೆ ಹೇಳುತ್ತಾನೆ; ‘ಈತನ ತಾಯಿ ನಿನ್ನ ತಂದೆಯ ಒಬ್ಬಳೇ ಮಗಳು’, ಹಾಗಾದರೆ, ಆ ವ್ಯಕ್ತಿಯೊಂದಿಗೆ ಮಹಿಳೆಯ ಸಂಬಂಧವೇನು?
ಎ) ಮಗಳು
ಬಿ) ಸಹೋದರಿ
ಸಿ) ತಾಯಿ
ಡಿ) ಪತ್ನಿ
950. ಜೇಡ:ಕೀಟ::ಮೊಸಳೆ:?
ಎ) ಸರೀಸೃಪ
ಬಿ) ಸಸ್ತನಿ
ಸಿ) ಕಪ್ಪೆ
ಡಿ) ಮಾಂಸಾಹಾರಿ
951. ಐಹೊಳೆ ಮತ್ತು ಬಾದಾಮಿಯ ದೇವಸ್ಥಾನಗಳು ಯಾರ ಶಿಲ್ಪಕಲೆಗಳ ನಿದರ್ಶನವಾಗಿದೆ?
ಎ) ಚಾಲುಕ್ಯರು
ಬಿ) ರಾಷ್ಟ್ರಕೂಟರು
ಸಿ) ಗಂಗರು
ಡಿ) ಹೊಯ್ಸಳರು
952. ಎಲ್ಲಾ ಆಮ್ಲಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಸ್ತು ಯಾವುದು?
ಎ) ಜಲಜನಕ
ಬಿ) ಇಂಗಾಲ
ಸಿ) ಗಂಧಕ
ಡಿ) ಆಮ್ಲಜನಕ
953. ಸೌರವ್ಯೂಹದಲ್ಲಿ ಅತಿ ಚಿಕ್ಕ ಗ್ರಹ ಯಾವುದು?
ಎ) ಯುರೇನಸ್
ಬಿ) ನೆಪ್ಚೂನ್
ಸಿ) ಬುಧ
ಡಿ) ಮಂಗಳ
954. ರೋರಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
ಎ) ಪ್ಯಾಥಾಲಜಿ
ಬಿ) ನೆಫ್ರಾಲಾಜಿ
ಸಿ) ನ್ಯೂರಾಲಾಜಿ
ಡಿ) ಆಂಜಿಯಾಲಾಜಿ
955. ‘ಧಾರವಾಡಿ’ ಇದು ಯಾವ ಪ್ರಾಣಿಯ ತಳಿ?
ಎ) ಆಕಳು
ಬಿ) ಎಮ್ಮೆ
ಸಿ) ಕುರಿ
ಡಿ) ಆಡು?
ಭಾಗ 68ರ ಉತ್ತರಗಳು: 926. ಸಿ, 927. ಡಿ, 928. ಎ, 929. ಡಿ, 930. ಡಿ, 931. ಬಿ, 932. ಎ, 933. ಸಿ, 934. ಬಿ, 935. ಸಿ, 936. ಡಿ, 937. ಎ, 938. ಡಿ, 939. ಬಿ, 940. ಎ
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.