
ಪ್ರಜಾವಾಣಿ ವಾರ್ತೆಪಣಜಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ಗೋವಾ ಚರ್ಚ್, ‘ಅಧ್ಯಕ್ಷೀಯ ಚುನಾವಣೆ ರೀತಿಯಲ್ಲಿ ಏಕ ವ್ಯಕ್ತಿ ಕೇಂದ್ರಿತವಾಗಿ ಚುನಾವಣಾ ಪ್ರಚಾರ ನಡೆಯುತ್ತಿದೆ’ ಎಂದು ಆರೋಪಿಸಿದೆ.
ಗೋವಾ ಧರ್ಮಪ್ರಾಂತದ ಸಮಾಜ ಸೇವಾ ಘಟಕವಾದ ಸಾಮಾಜಿಕ ನ್ಯಾಯ ಮತ್ತು ಶಾಂತಿ ಮಂಡಳಿಯು (ಸಿಎಸ್ಜೆಪಿ) ಬುಧವಾರ ಬಿಡುಗಡೆ ಮಾಡಿರುವ ಚುನಾವಣಾ ಸಂಬಂಧಿ ಕರಪತ್ರದಲ್ಲಿ ಈ ರೀತಿ ಹೇಳಿದೆ.
ಉತ್ತಮ ಆಡಳಿತದ ‘ಕಲ್ಪಿತ’ ಮಾದರಿಗಳನ್ನು ಸಮಾಜದ ಮುಂದೆ ಪ್ರದರ್ಶಿಸಲಾಗುತ್ತಿದೆ ಎಂದೂ ಸಿಎಸ್ಜೆಪಿ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.