ADVERTISEMENT

ಏಕ ವ್ಯಕ್ತಿ ಚುನಾವಣಾ ಪ್ರಚಾರ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಪಣಜಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ಗೋವಾ ಚರ್ಚ್‌, ‘ಅಧ್ಯಕ್ಷೀಯ ಚುನಾವಣೆ ರೀತಿಯಲ್ಲಿ ಏಕ ವ್ಯಕ್ತಿ ಕೇಂದ್ರಿತ­ವಾಗಿ ಚುನಾವಣಾ ಪ್ರಚಾರ ನಡೆಯುತ್ತಿದೆ’ ಎಂದು ಆರೋಪಿಸಿದೆ.

ಗೋವಾ ಧರ್ಮಪ್ರಾಂತದ ಸಮಾಜ ಸೇವಾ ಘಟಕವಾದ ಸಾಮಾಜಿಕ ನ್ಯಾಯ ಮತ್ತು ಶಾಂತಿ ಮಂಡಳಿಯು (ಸಿಎಸ್‌ಜೆಪಿ) ಬುಧವಾರ ಬಿಡುಗಡೆ ಮಾಡಿರುವ ಚುನಾವಣಾ ಸಂಬಂಧಿ ಕರಪತ್ರದಲ್ಲಿ ಈ ರೀತಿ ಹೇಳಿದೆ.

ಉತ್ತಮ ಆಡಳಿತದ ‘ಕಲ್ಪಿತ’ ಮಾದರಿಗಳನ್ನು ಸಮಾಜದ ಮುಂದೆ ಪ್ರದರ್ಶಿಸಲಾಗುತ್ತಿದೆ ಎಂದೂ ಸಿಎಸ್‌ಜೆಪಿ ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.