ADVERTISEMENT

ಅಡ್ವಾಣಿ ನಿಷ್ಠನ ಬದಲು ಪರೇಶ್‌ ರಾವಲ್‌ಗೆ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಟಿಕೆಟ್‌ ನೀಡಿಕೆಯಲ್ಲಿ ಉಂಟಾದ ವಿವಾ­ದದ ಬಿಸಿ ಆರುವ ಮೊದಲೇ ಹೊಸ­ದೊಂದು ವಿವಾದ ಸೃಷ್ಟಿಯಾಗುವ ಅಪಾಯ ಬಿಜೆಪಿಗೆ ಎದುರಾಗಿದೆ. ಅಡ್ವಾಣಿ ಅವರ ನಿಷ್ಠರಾಗಿರುವ, ಅಹಮದಾಬಾದ್‌ ಪೂರ್ವದ ಹಾಲಿ ಸಂಸದ ಹರೀನ್‌ ಪಾಠಕ್‌ ಅವರಿಗೆ ಟಕೆಟ್‌ ನಿರಾಕರಿಸಿ ನಟ ಪರೇಶ್‌ ರಾವಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಭಾನುವಾರ ಬಿಡುಗಡೆ ಮಾಡಲಾದ ಒಂಬತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ ಪರೇಶ್‌ ರಾವಲ್‌ ಹೆಸರು ಪ್ರಕಟಿಸ­ಲಾಗಿದೆ.ಅಡ್ವಾಣಿ ಅವರು ಗಾಂಧಿನಗರ­ದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದ­ರಿಂದಾಗಿ ಮಧ್ಯಪ್ರದೇಶ ಬಿಜೆಪಿ ಕಚೇರಿ ಉಸ್ತುವಾರಿ ಅಲೋಕ್‌ ಸಂಜರ್‌ ಅವ­ರಿಗೆ ಭೋಪಾಲ್‌ ಟಿಕೆಟ್‌ ನೀಡಲಾಗಿದೆ. ಅಡ್ವಾಣಿ ಅವರಿಗಾಗಿ ಹಾಲಿ ಸಂಸದ ಕೈಲಾಶ್ ಜೋಷಿ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ಇಲ್ಲಿಗೆ ಹೊಸದಾಗಿ ಅಭ್ಯರ್ಥಿಯನ್ನು ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.