ADVERTISEMENT

ಜೆಡಿಎಸ್‌ ನಾಯಕರು ಕಾಂಗ್ರೆಸ್‌ಗೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 20:05 IST
Last Updated 23 ಮಾರ್ಚ್ 2014, 20:05 IST

ಕನಕಪುರ:  ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ತಾಲ್ಲೂಕಿನಲ್ಲಿ ರಾಜ­ಕೀಯ ಚಟುವಟಿಕೆ ಬಿರುಸು­ಗೊಂ­ಡಿದ್ದು, ಜೆ.ಡಿ.ಎಸ್‌ ಅತೃಪ್ತ ನಾಯಕರು ಮತ್ತು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಕಸಬಾ ಹೋಬಳಿ ತಿಗಳರಹಳ್ಳಿ ಮತ್ತು ಹಳ್ಳಸಂದ್ರ ಗ್ರಾಮದ ಜೆ.ಡಿ.­ಎಸ್‌ ಪಕ್ಷದಲ್ಲಿ ಗುರುತಿಸಿ­ಕೊಂ­ಡಿದ್ದ ನೂರಾರು ಜೆಡಿಎಸ್ ಕಾರ್ಯ­ಕರ್ತರು ಹಾಗೂ ಮುಖಂಡರು ತಿಗಳರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ಆರ್‌.ಶ್ರೀನಿವಾಸ್‌ ನೇತೃತ್ವ­ದಲ್ಲಿ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಪಕ್ಷಕ್ಕೆ ಬಂದ ನೂರಾರು ಮುಖಂಡ­ರನ್ನು ಸಂಸದ ಡಿ.ಕೆ.ಸುರೇಶ್ ಅವರು ಪಕ್ಷದ ಶಾಲನ್ನು ಹಾಕುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಸೇರ್ಪಡೆಯ ನಾಯಕತ್ವ ವಹಿಸಿದ್ದ ಟಿ.ಆರ್‌.ಶ್ರೀನಿ­ವಾಸ್‌ ಮಾತನಾಡಿ, ‘ಜೆ.ಡಿ.ಎಸ್‌ ಪಕ್ಷ­ದಲ್ಲಿ ಪ್ರಮಾಣಿಕ ಕಾರ್ಯಕರ್ತ­ರಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಹೋರಾಟ ನಡೆಸಿ ಗೆಲವು ಸಾಧಿಸಿದೆ.  ಡಿ.ಕೆ.ಶಿವಕು­ಮಾರ್‌ ಮತ್ತು ಡಿ.ಕೆ.­ಸುರೇಶ್‌ ಅವರು ತಾಲ್ಲೂಕಿನ ಜನತೆಗೆ ಕೊಟ್ಟ ಮಾತಿ­ನಂತೆ ನಡೆದು­ಕೊಳ್ಳು­ತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಸೇರಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್‌.ರವಿ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಯೋಜನಾ ಪ್ರಾಧಿ­ಕಾರದ ಅಧ್ಯಕ್ಷ ಎಂ.ಡಿ.ವಿಜಯ ದೇವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಯ­ಸಂದ್ರ­ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT