ADVERTISEMENT

ಪದ್ಮನಾಭನಗರ| ಕಾದು ನೋಡಲು ‘ಕೈ’ ತಂತ್ರ: ಡಿ.ಕೆ ಸುರೇಶ್‌ ಸ್ಪರ್ಧೆ ಸಾಧ್ಯತೆ ಜೀವಂತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 4:54 IST
Last Updated 18 ಏಪ್ರಿಲ್ 2023, 4:54 IST
ಡಿ.ಕೆ. ಸುರೇಶ್‌ ಮತ್ತು ಆರ್‌. ಅಶೋಕ
ಡಿ.ಕೆ. ಸುರೇಶ್‌ ಮತ್ತು ಆರ್‌. ಅಶೋಕ   

ಬೆಂಗಳೂರು: ಪದ್ಮನಾಭನಗರದಲ್ಲಿ ಬಿಜೆಪಿಯಿಂದ ಆರ್‌. ಅಶೋಕ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿ ಫಾರಂ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಇನ್ನೂ ಕಾದುನೋಡುವ ತಂತ್ರದ ಅನುಸರಿಸಿದ್ದಾರೆ. ಜೆಡಿಎಸ್‌ ಇನ್ನೂ ಅಭ್ಯರ್ಥಿಯನ್ನೇ ಪ್ರಕಟಿಸಿಲ್ಲ.

‘ಸೋಮವಾರ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಒಂದೆರಡು ದಿನ ತಡೆಯಿರಿ ಎಂಬ ಸೂಚನೆ ಹಿರಿಯ ನಾಯಕರಿಂದ ಬಂದಿದೆ. ಹೀಗಾಗಿ ಅವರ ಆದೇಶಕ್ಕೆ ಕಾಯುತ್ತಿದ್ದೇನೆ’ ಎಂದು ರಘುನಾಥ ನಾಯ್ಡು ತಿಳಿಸಿದರು.

ಸಂಸದ ಡಿ.ಕೆ. ಸುರೇಶ್‌ ಅವರನ್ನು ಪದ್ಮನಾಭನಗರದಲ್ಲಿ ಕಣಕ್ಕಿಳಿಸುವ ವಿಚಾರ ಇನ್ನೂ ಚಾಲನೆಯಲ್ಲಿದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.