ಬಳ್ಳಾರಿ:‘ಎಲ್ಲರನ್ನೂ ಒಳಗೊಳ್ಳುವ ಕಾಂಗ್ರೆಸ್ರಾಜಕೀಯ ಸಿದ್ಧಾಂತ ಮತ್ತು ದೇಶದ ಜನರನ್ನು ವಿಭಜಿಸುವ ಬಿಜೆಪಿ ಸಿದ್ಧಾಂತದ ನಡುವಿನ ಹೋರಾಟದಲ್ಲಿ ಮತದಾರರು ಪ್ರಜಾಸತ್ತಾತ್ಮಕವಾದ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರನ್ನು ಬೆಂಬಲಿಸಬೇಕು’ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.
ಪ್ರಜಾಪ್ರಭುತ್ವ ವಿರೋಧಿಯಾದ ಸರ್ವಾಧಿಕಾರಿ ಆಡಳಿತ ಮೋದಿಯವರದ್ದು. ತಮ್ಮ ಸರ್ಕಾರದ ಸಚಿವರಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಮೋದಿ ಅವಕಾಶ ನೀಡಲೇ ಇಲ್ಲ. ಅಂಥ ಮೋದಿಯನ್ನು ನೋಡಿ ಮತ ಹಾಕಿ ಎಂದು ಅಭ್ಯರ್ಥಿ ಗಳು ಕೇಳುತ್ತಿರುವುದು ವಿಪರ್ಯಾಸಎಂದು ನಗರದಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ವಿಷಾದಿಸಿದರು.
ಪ್ರಧಾನಿ ಮೋದಿ ಐದು ವರ್ಷಗಳಲ್ಲಿ ಯಾವ ಭರವಸೆ ಗಳನ್ನೂ ಈಡೇರಿಸಲಿಲ್ಲ. ಭಯೋತ್ಪಾದಕ ರ ಮೇಲಿನ ದಾಳಿಯನ್ನು, ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಅವರು ಚುನಾವಣೆ ಪ್ರಚಾರಕ್ಕೆ ಬಳಸುತ್ತಿರುವುದು ಖಂಡನೀಯಎಂದರು.
ಚುನಾವಣೆ ಯು ರಾಷ್ಟ್ರಭಕ್ತರು ಮತ್ತು ಭಕ್ತರಲ್ಲದವರ ನಡುವಿನ ಹೋರಾಟ ಎಂದು ಬಿಜೆಪಿ ಬಿಂಬಿಸುತ್ತಿದೆ. ಆದರೆ ಚುನಾವಣೆಯು ನಕಲಿ ದೇಶಭಕ್ತರು ಮತ್ತು ನಿಜವಾದ ದೇಶ ಭಕ್ತರ ನಡುವಿನ ಹೋರಾಟಎಂದು ಪ್ರತಿಪಾದಿಸಿದರು.
ಸ್ವಚ್ಛ ಭಾರತ್ ಕಾರ್ಯಕ್ರಮದ ಜಾಹೀರಾತಿಗೆ ಕೋಟಿಗಟ್ಟಳೆ ಖರ್ಚು ಮಾಡಿರುವ ಕೇಂದ್ರ ಸರ್ಕಾರವು ದೇಶದ ಶೇ ೫೦ ಪೌರಕಾರ್ಮಿಕರಿಗೆ ವೇತನವನ್ನೇ ನೀಡಿಲ್ಲಎಂದು ಆರೋಪಿಸಿದರು.
ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಬಗ್ಗೆ, ಕಪ್ಪು ಹಣವನ್ನು ತರದೇ ಇರುವ ಬಗ್ಗೆ ಮಾತನಾಡದ ಮೋದಿ ಮತ್ತೆ ಐದು ವರ್ಷಗಳ ಕಾಲ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿರುವುದು ಆತಂಕಕಾರಿ ಸಂಗತಿಎಂದರು.
‘ಕುಮಾರಸ್ವಾಮಿ ಹೇಳಿಕೆ ಸರಿ’
‘ಎರಡು ಹೊತ್ತು ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಿಯಾಗಿಯೇ ಮಗ ಹೇಳಿದ್ದಾರೆ. ಸೈನ್ಯಕ್ಕೆ ಸೇರಲು ಇರುವ ಹಲವು ಕಾರಣಗಳಲ್ಲಿ ಬಡತನವೂ ಒಂದು ಪ್ರಮುಖ ಕಾರಣ’ಎಂದು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.