ADVERTISEMENT

ವಿಜಯಪುರ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಸುನಿತಾ ಪರ ಎಂ.ಬಿ.ಪಾಟೀಲ್‌ ಪ್ರಚಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 16:28 IST
Last Updated 21 ಏಪ್ರಿಲ್ 2019, 16:28 IST
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಭಾನುವಾರ ಸಚಿವ ಎಂ.ಬಿ.ಪಾಟೀಲ ಪ್ರಚಾರ ನಡೆಸಿದರು
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಭಾನುವಾರ ಸಚಿವ ಎಂ.ಬಿ.ಪಾಟೀಲ ಪ್ರಚಾರ ನಡೆಸಿದರು   

ವಿಜಯಪುರ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆ ದಿನವಾದ ಭಾನುವಾರ ಗೃಹ ಸಚಿವ ಎಂ.ಬಿ.ಪಾಟೀಲ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ, ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಪರ ಮತ ಯಾಚಿಸಿದರು.

ವಿವಿಧ ಗ್ರಾಮಗಳ ಮುಖಂಡರ ಮನೆ, ತೋಟಗಳಿಗೆ ಎಡತಾಕಿ ಪಕ್ಷದ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ, ಚುನಾವಣೆಯ ತಂತ್ರಗಾರಿಕೆ ರೂಪಿಸಿದರು.

ನಿಡೋಣಿ, ಕಂಬಾಗಿ, ಗುಣದಾಳ, ಹೊಸೂರು, ದೇವರಗೆಣ್ಣೂರ, ಜೈನಾಪುರ, ಬಬಲೇಶ್ವರದಲ್ಲಿ ಮತ ಯಾಚಿಸಿದರು. ತಮ್ಮ ಬೆಂಬಲಿಗರು, ಕಾರ್ಯಕರ್ತರಿಗೆ ಇದೇ ಸಂದರ್ಭ ಮನೆ ಮನೆಗೂ ತೆರಳಿ ಮತ ಯಾಚನೆ ನಡೆಸುವಂತೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.