ADVERTISEMENT

ಕಾಂಗ್ರೆಸ್‌ ಜಾತಿಗಳ ನಡುವೆ ಕಲಹ ಹುಟ್ಟುಹಾಕುತ್ತಿದೆ: ಅಮಿತ್‌ ಶಾ ಆರೋಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 9:29 IST
Last Updated 12 ಏಪ್ರಿಲ್ 2018, 9:29 IST
ಕಾಂಗ್ರೆಸ್‌ ಜಾತಿಗಳ ನಡುವೆ ಕಲಹ ಹುಟ್ಟುಹಾಕುತ್ತಿದೆ: ಅಮಿತ್‌ ಶಾ ಆರೋಪ
ಕಾಂಗ್ರೆಸ್‌ ಜಾತಿಗಳ ನಡುವೆ ಕಲಹ ಹುಟ್ಟುಹಾಕುತ್ತಿದೆ: ಅಮಿತ್‌ ಶಾ ಆರೋಪ   

ಧಾರವಾಡ: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಕಷ್ಟು ಇದೆ. ಪ್ರಧಾನಿ ನರೇಂದ್ರ ಮೊದಿ ಅವರ ಮೇಲೆ ದೇಶದ ಜನರು ವಿಶ್ವಾಸ ಇಟ್ಟಿದ್ದಾರೆ. ದೇಶದಲ್ಲಿ ಜಾತಿ ಜಾತಿಗಳ ನಡುವೆ ಕಲಹ ಹುಟ್ಟಿಸಿ ಅಧಿಕಾರ ನಡೆಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

2014ರಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಬಹುಮತ ಸಿಕ್ಕು ದೇಶದಲ್ಲಿ ಬಿಜೆಪಿ ಬಂತು. ದೇಶದ ಎಲ್ಲ ರಾಜ್ಯಗಳ ನಡುವೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ಚುನಾವಣೆ ಈಗ ಇದೆ. ಯಾರೂ ಬೇಕಾದ್ರು ಕೆಳಿಸಿಕೊಳಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದರು.

ADVERTISEMENT

ನಾವು ಜನತಾ ನ್ಯಾಯಾಲಯಕ್ಕೆ ಬಂದಿದ್ದೇವೆ. ಕರ್ನಾಟಕ ರಾಜ್ಯ ಭ್ರಷ್ಟಾಚಾರ ಮಾಡಲು ಎಟಿಎಂ ಇದ್ದಂಗೆ ಇದೆ. ಹೀಗಾಗಿ ಈ ಎಟಿಎಂ ಉಳಿಸಿಕೊಳ್ಳಲು ರಾಹುಲ್ ಗಾಂಧಿ ರಾಜ್ಯದಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಂ 40 ಲಕ್ಷದ ವಾಚ್‌ ಕಟ್ಟಿಕೊಂಡು ತಿರುಗುತ್ತಾರೆ. ಕೈ ಮುಗಿದು ಕೆಳುತ್ತೆನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ ಎಂದು ಶಾ ಮನವಿ ಮಾಡಿದರು.

ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ: ಬಂಧನ
ಅಮಿತ್ ಶಾಗೆ ಕಪ್ಪು ಬಾವುಟ ಪ್ರದರ್ಶಿಸಲು ಬಂದಿದ್ದ ಸಮತಾ ಸೇನೆಯ ಆರು ಮಂದಿ ಕಾರ್ಯಕರ್ತರನ್ನು ಧಾರವಾಡದದ ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸರು ಬಂಧಿಸಿದ್ದಾರೆ.

ಅಮಿತ್ ಶಾ ವಿರುದ್ಧ ಘೋಷಣೆ ಹಾಕಿದ ಕಾರ್ಯಕರ್ತರು, ಕೋಮುವಾದಿ ಅಮಿತ್ ಶಾಗೆ ಧಿಕ್ಕಾರ ಎಂದು ಕೂಗಿದರು. ಕಾರ್ಯಕರ್ತರನ್ನು ಕರೆದೊಯ್ದ ಪೊಲೀಸರು, ಹಲವು ಕಪ್ಪು ಬಾವುಟ ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.