ಭಾಮಾ ಹರೀಶ್ ನಿರ್ಮಿಸಿರುವ, `ಮಾಗಡಿ~ ಚಿತ್ರಕ್ಕೆ ಸೆನ್ಸಾರ್ ಮಂಡಳಿಯ `ಯು/ಎ~ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರ ಮಾರ್ಚ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಕೆ ಸುರೇಶ್ ಗೋಸ್ವಾಮಿ ಅವರದು.
ಛಾಯಾಗ್ರಹಣ ರಮೇಶ್, ಸಂಗೀತ ರಾಜೇಶ್ ರಾಮನಾಥ್, ಸಂಕಲನ ಎನ್.ಎಂ. ವಿಶ್ವ. ಚಿತ್ರದಲ್ಲಿ ದೀಪಕ್, ರಕ್ಷಿತಾ, ರವಿ, ರಂಗತೇಜ, ಮಹೇಶ್, ಗೋಪಿ, ಲಿಂಗೇನಹಳ್ಳಿ ಸುರೇಶ್ ಚಂದ್ರ, ರಮೇಶ್ ಪಂಡಿತ್, ಉಯ್ಯಾಲೆ ಶಿಲ್ಪ, ಮೈಸೂರು ಮಲ್ಲೇಶ್, ಜಯಶ್ರೀ, ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.