ADVERTISEMENT

‘ಲಂಗ ದಾವಣಿ’ ಚಾಲೆಂಜ್‌: ನಟಿ ಅಮೂಲ್ಯ ಮಾಡಿದ ರೀಲ್ ವೈರಲ್‌

ನಟಿ ನಿಶ್ವಿಕಾ ನಾಯ್ಡು ನೀಡಿದ್ದ ‘ಲಂಗ ದಾವಣಿ’ ಚಾಲೆಂಜ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 11:04 IST
Last Updated 18 ಜುಲೈ 2022, 11:04 IST
ಅಮೂಲ್ಯ
ಅಮೂಲ್ಯ   

ನಟ ಶರಣ್‌ ಅಭಿನಯದ ‘ಗುರುಶಿಷ್ಯರು’ ಸಿನಿಮಾದ ನಾಯಕಿ ನಿಶ್ವಿಕಾ ನಾಯ್ಡು ಹಾಕಿರುವ ರೀಲ್ಸ್‌ ಸವಾಲಿಗೆ ಚಂದನವನದ ನಟಿಯರು ಹೆಜ್ಜೆ ಹಾಕುತ್ತಿದ್ದಾರೆ. ನಟಿ ರಂಜಿನಿ ರಾಘವನ್‌ ಬಳಿಕ ಇದೀಗ ನಟಿ ಅಮೂಲ್ಯ ಲಂಗ–ದಾವಣಿ ಚಾಲೆಂಜ್‌ ಸ್ವೀಕರಿಸಿದ್ದಾರೆ. ಸದ್ಯ ಈ ರೀಲ್‌ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು 10 ಲಕ್ಷಕ್ಕೂ ಅಧಿಕ ಜನರು ಇದನ್ನು ವೀಕ್ಷಿಸಿದ್ದಾರೆ.

ಜಡೇಶ್ ಕುಮಾರ್ ನಿರ್ದೇಶನದ ‘ಗುರು ಶಿಷ್ಯರು’ ಸಿನಿಮಾದ ‘ಆಣೆ ಮಾಡಿ ಹೇಳುತೀನಿ’ ಹಾಡು ಪ್ರೇಕ್ಷಕರನ್ನು ಸೆಳೆದಿದೆ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿರುವ ಈ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಹಾಕಿರುವ ಹೆಜ್ಜೆ ಈಗಾಗಲೇ ಮೋಡಿ ಮಾಡಿದೆ.

‘ಆಣೆಮಾಡಿಹೇಳುತೀನಿ’ ಹಾಡಿಗೆ ಲಂಗ ದಾವಣಿ ಹಾಕಿಕೊಂಡು ಸ್ವತಃ ರೀಲ್ಸ್‌ ಮಾಡಿರುವ ನಿಶ್ವಿಕಾ ಸವಾಲು ಎಸೆದಿದ್ದಾರೆ. ಆಯ್ದ ರೀಲ್ಸ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಿದ್ದೇನೆ ಎಂದೂ ನಿಶ್ವಿಕಾ ತಿಳಿಸಿದ್ದಾರೆ.

ADVERTISEMENT

ಇದರ ಬೆನ್ನಲ್ಲೇ ನಟಿ ರಂಜಿನಿ ರಾಘವನ್‌ ಈ ಸವಾಲು ಸ್ವೀಕರಿಸಿದ್ದರು. ಇದೀಗ ಅಮೂಲ್ಯ ಹೆಜ್ಜೆ ಹಾಕಿದ್ದು, ಇದು ಅವರು ಮಾಡಿರುವ ಮೊದಲ ರೀಲ್‌.ಇತ್ತೀಚೆಗಷ್ಟೇಅವಳಿಮಕ್ಕಳಿಗೆಜನ್ಮನೀಡಿದ್ದಅಮೂಲ್ಯ, ಮತ್ತೆ ನಟನೆಯತ್ತ ಹೆಜ್ಜೆ ಇಡುತ್ತಾರಾ ಎನ್ನುವುದು ಈ ರೀಲ್‌ ವೀಕ್ಷಿಸಿದ ಬಳಿಕ ಅಭಿಮಾನಿಗಳು ಮುಂದಿಟ್ಟಿರುವ ಪ್ರಶ್ನೆಯಾಗಿದೆ. ಇದಕ್ಕೆ ಪೂರಕವಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಮೂಲ್ಯ ಹೊಸ ಫೊಟೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ.

ಗುರು ಶಿಷ್ಯರು ಸಿನಿಮಾದಲ್ಲಿ ಶರಣ್ ಪಿಟಿ ಟೀಚರ್‌ ಪಾತ್ರ ಮಾಡುತ್ತಿದ್ದಾರೆ. ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿ ‘ಸೂಜಿ’ ಪಾತ್ರದಲ್ಲಿ ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಉದ್ಯಮಿಯಾಗಿ ನಟಿಸಿದ್ದಾರೆ. ಗುರುಶಿಷ್ಯರು ಚಿತ್ರದ ಕಥೆ 1995ರಲ್ಲಿ ನಡೆಯುವಂಥದ್ದಾಗಿದ್ದು, ಹಲವು ಕಲಾವಿದರು ಮಕ್ಕಳು ಇಲ್ಲಿ ವಿದ್ಯಾರ್ಥಿಗಳಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.