ADVERTISEMENT

Anantha Kaalam: ‘ಅನಂತ ಕಾಲಂ’ ಎಂದ ಹೊಸಬರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 23:30 IST
Last Updated 1 ಜುಲೈ 2025, 23:30 IST
ಪೃಥ್ವಿರಾಜ್ ಶೆಟ್ಟಿ
ಪೃಥ್ವಿರಾಜ್ ಶೆಟ್ಟಿ   

ಬಹುತೇಕ ಹೊಸಬರಿಂದಲೇ ಕೂಡಿರುವ ‘ಅನಂತ ಕಾಲಂ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್‌ ಜಾನರ್‌ನ ಈ ಚಿತ್ರಕ್ಕೆ ವಿಜಯ್ ಮಂಜುನಾಥ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.  

‘ಸಿನಿಮಾ ವಿಚಾರದಲ್ಲಿ ಒಂದಷ್ಟು ಜಾನರ್‌ಗಳು ಇವೆ. ಅದರಲ್ಲಿ ಒಂದೊಂದು ಜಾನರ್ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಈ ಸಿನಿಮಾ ಹಾರರ್ ಎಂದು ಹೇಳಲು ಆಗುವುದಿಲ್ಲ. ಆದರೆ ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಮಳೆಗಾಲ ಮುಗಿದ ಬಳಿಕ ಉಳಿದ ಚಿತ್ರೀಕರಣ ಮಾಡುತ್ತೇವೆ. ನವೆಂಬರ್‌ ಅಥವಾ ಡಿಸೆಂಬರ್‌ಲ್ಲಿ ತೆರೆಗೆ ಬರುವ ಯೋಚನೆಯಿದೆ’ ಎಂದರು ನಿರ್ದೇಶಕರು.

ಪೃಥ್ವಿರಾಜ್ ಶೆಟ್ಟಿ ಚಿತ್ರದ ನಾಯಕ. ವಿಲಿಯಂಟ್ ವಿಷನ್ ಕ್ರಿಯೇಷನ್ಸ್ ಬಂಡವಾಳ ಹೂಡತ್ತಿದೆ. ಭುವನ್ ಶಂಕರ್ ಮತ್ತು ಸನ್ಸ್‌ಕಾರ್‌ ಸಂಗೀತ, ಗುರುಪ್ರಸಾದ್ ನರ್ನಾಡ್‌ ಛಾಯಾಚಿತ್ರಗ್ರಹಣವಿದೆ. ಉಳಿದ ಕೆಲ ಪ್ರಮುಖ ಪಾತ್ರಗಳಿಗೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದಿದೆ ಚಿತ್ರತಂಡ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.